28 C
Mumbai
September 19, 2026
Mumbai News Kannada
ಪ್ರಕಟಣೆ

ಶ್ರೀ ಅಯ್ಯಪ್ಪ ಯಕ್ಷಕಲಾ ಪ್ರತಿಷ್ಠಾನ ಮುಂಬೈ : ಮಾ. 14ಕ್ಕೆ ವಾರ್ಷಿಕೋತ್ಸವ (ವಿದ್ಯಾರ್ಥಿಗಳಿಗೆ ಧನ ಸಹಾಯ, ಯಕ್ಷಗಾನ ಪ್ರದರ್ಶನ)





ಶ್ರೀ ಅಯ್ಯಪ್ಪ ಯಕ್ಷಕಲಾ ಪ್ರತಿಷ್ಠಾನ, ಮುಂಬೈ ಇದರ 13ನೇ ವಾರ್ಷಿಕೋತ್ಸವದ ಅಂಗವಾಗಿ, ಶ್ರೀ ದುರ್ಗಾಪರಮೇಶ್ವರಿ ಅಯ್ಯಪ್ಪ ಟ್ರಸ್ಟ್, ಖಾರ್ ರೋಡ್, ಮುಂಬೈ ಇವರ ಸಹಯೋಗದಲ್ಲಿ ಮಾರ್ಚ್ 14ರಂದು ಶನಿವಾರ ಮಧ್ಯಾಹ್ನ 3:30 ರಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಧನಸಹಾಯ ವಿತರಣೆ ಹಾಗೂ ಪ್ರತಿಷ್ಠಾನದ ವತಿಯಿಂದ ಯಕ್ಷಗಾನ ಕಾರ್ಯಕ್ರಮವು ಶ್ರೀ ವರದ ಸಿದ್ಧಿ ವಿನಾಯಕ ಸಭಾಗ್ರಹ , ಬೋಪರ್ ರೋಡ್, ನಾಂದಿವಿಲಿ, ಡೊಂಬಿವಲಿ (ಪೂರ್ವ) ಇಲ್ಲಿ ನಡೆಯಲಿದೆ. ಈ ಕಾರ್ಯಕ್ರಮವು ಶ್ರೀ ಅಯ್ಯಪ್ಪ ಯಕ್ಷಕಲಾ ಪ್ರತಿಷ್ಠಾನ, ಮುಂಬೈ ಇದರ ಗೌರವಾಧ್ಯಕ್ಷರಾದ ಶ್ರೀ ರಾಜು ಮೆಂಡನ್ ವಂಡ್ಸೆ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟಕರಾಗಿ ಹೋಟೆಲ್ ಟೇಸ್ಟ್ ಆಫ್ ಬೈಟ್ಸ್ ಇದರ ಮಾಲಕರಾದ ಶ್ರೀ ರತ್ನಾಕರ್ ಶೆಟ್ಟಿ ಆಗಮಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಶ್ರೀ ಉದಯ ಶೆಟ್ಟಿ ಆರ್ಡಿ, ಹೋಟೆಲ್ ಪ್ರವೀಣ್ ಇಂಟರ್ನ್ಯಾಷನಲ್ ಉಲ್ಲಾಸ್ ನಗರ್ ಉಪಸ್ಥಿತರಿರುವರು.

ಗೌರವ ಅತಿಥಿಗಳಾಗಿ ಮೊಗವೀರ ಮಹಾಜನ ಸೇವಾ ಸಂಘ ತಾಣೆ ಸ್ಥಳೀಯ ಸಮಿತಿ ಇದರ ಕಾರ್ಯಧ್ಯಕ್ಷರಾದ ಶ್ರೀ ಅವಿನಾಶ್ ಪುತ್ರನ್ ,ಮುಂಬೈನ ಉದ್ಯಮಿ ಹಾಗೂ ಕಲಾ ಪೋಷಕರಾದ ಶ್ರೀ ಸದಾನಂದ ಶೆಟ್ಟಿ ನಂದ್ರೊಳ್ಳಿ, ಶ್ರೀ ರಮೇಶ್ ಶೆಟ್ಟಿ ಸಿವಿಲ್, ಹೋಟೆಲ್ ಇಗೋ, ಡೊಂಬಿವಲಿ ಇದರ ಮಾಲಕರಾದ ಶ್ರೀ ಸತೀಶ್ ಶೆಟ್ಟಿ ನಂದ್ರೊಳ್ಳಿ, ಅಯ್ಯಪ್ಪ ಯಕ್ಷಕಲಾ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಜಯರಾಮ ಶೆಟ್ಟಿ ಇಡೂರು, ಹೋಟೆಲ್ ಆನಂದ, ಶಹಡ್ ಇದರ ಮಾಲಕರಾದ ಶ್ರೀ ಗಣೇಶ್ ಶೆಟ್ಟಿ ನಂದ್ರೊಳ್ಳಿ, ಮುಂಬೈನ ಉದ್ಯಮಿ ಹಾಗೂ ಕಲಾ ಪೋಷಕರಾದ ಶ್ರೀ ನಾರಾಯಣ್ ಚಂದ್ರನ್, ಶ್ರೀ ದುರ್ಗಾಪರಮೇಶ್ವರಿ ಅಯ್ಯಪ್ಪ ಟ್ರಸ್ಟ್, ಖಾರ್ ಮುಂಬೈ ಇದರ ಅಧ್ಯಕ್ಷರಾದ ಶ್ರೀ ಅಶೋಕ್ ಶೆಟ್ಟಿ ಗುರುಸ್ವಾಮಿ, ಶ್ರೀ ಶ್ರೀ ಫುಡ್ಸ್ ಇದರ ಮಾಲಕರಾದ ಶ್ರೀ ಸಿ. ಅಶೋಕ್ ಮರತ್ತೂರು, ಪ್ರಾಧಾನ್ಯ ಹಾಸ್ಪಿಟಾಲಿಟಿ ಸರ್ವಿಸಸ್ ಇದರ ಶ್ರೀ ಅಶೋಕ್ ಮೆಂಡನ್, ಹಾಗೂ ಶ್ರೀ ವಿಠ್ಠಲ್ ಟೆಕ್ಸ್ಟೈಲ್ಸ್ ಇದರ ಮಾಲಕರಾದ ಶ್ರೀ ರಘುರಾಮ್ ಮೆಂಡನ್ ಅವರು ಉಪಸ್ಥಿತರಿರುವರು.

ಈ ಸಂದರ್ಭದಲ್ಲಿ ಕುಮಾರಿ ದಿಶಾ ದೇವಾಡಿಗ, ಕುಮಾರಿ ನಿಧಿ ಪ್ರಭು ಹಾಗೂ ಕುಮಾರಿ ಯುಕ್ತಿ ದೇವಾಡಿಗ ಇವರಿಗೆ ಪ್ರತಿಭಾ ಪುರಸ್ಕಾರವನ್ನು ಪ್ರಧಾನಿಸಲಾಗುವುದು. ಹಾಗೆಯೇ ಶ್ರೀ ನಾರಾಯಣ ಶೆಟ್ಟಿ ನಂದ್ರೊಳ್ಳಿ ಅವರ ವಿರಚಿತ ಹಾಗೂ ಶ್ರೀ ಸುರೇಶ್ ಶೆಟ್ಟಿ ನಂದ್ರೊಳ್ಳಿ ಅವರ ಪದ್ಯ ರಚನೆಯ ‘ಕಾಶಿ ತೀರ್ಥ’ ಎಂಬ ನೂತನ ಯಕ್ಷಗಾನ ಪ್ರಸಂಗವು ಪ್ರಸ್ತುತಗೊಳ್ಳಲಿದೆ.

ಈ ಕಾರ್ಯಕ್ರಮಕ್ಕೆ ಮುಂಬೈನ ಎಲ್ಲಾ ಕಲಾರಾಧಕರು ಮತ್ತು ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕ್ಲಪ್ತ ಸಮಯಕ್ಕೆ ಹಾಜರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.



Related posts

ಅಕ್ಟೊಬರ್  29 ರಂದು ಭಾನುವಾರ   ಆಲ್ ಅಮೇರಿಕಾ ತುಳುಕೂಟ ದ  ”ತುಳು  ಉಚ್ಚಯ 2023”  ಉತ್ಸವ ಕಾರ್ಯಕ್ರಮ 

Mumbai News Desk

ಜ.7ರಂದು ಶ್ರೀ ಅಯ್ಯಪ್ಪ ಭಕ್ತ ವೃಂದ, ಸಾಮಾಜಿಕ ಸಂಸ್ಥೆ, ನಾಲಾಸೋಪರ, ಇದರ ವಾರ್ಷಿಕ ಅಯ್ಯಪ್ಪ ಮಹಾಪೂಜೆ.

Mumbai News Desk

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಫೆ. 11 ರಿಂದ 15 ರವರೆಗೆ ಕುಂಭ ಮಹೋತ್ಸವ

Mumbai News Desk

ಮಾ. 23,  ತುಳು ಸಂಘ, ಬೋರಿವಲಿ, 13ನೇ ವಾರ್ಷಿಕೋತ್ಸವ,  ಸಾಂಸ್ಕೃತಿಕ ವೈಭವ, ನಾಟಕ ಪ್ರದರ್ಶನ

Mumbai News Desk

ಅ. 24ರಂದು ಮಾಲಾಡ್ ಪೂರ್ವ  ಓಂ ಶ್ರೀ ಸಾಯಿ ದುರ್ಗಾ ನಿತ್ಯಾನಂದ ಟ್ರಸ್ಟ್  ನವರಾತ್ರಿ ಪೂಜೆ 

Chandrahas

ಜ.24 ; ಬಂಟ್ಸ್ ಫೋರಮ್ ಸದಸ್ಯರಿಂದ ‘ಪನರೆ ಪೋವೊಡ್ಚಿ’ ಮತ್ತು ‘ಸಂಸಾರದ SOME ಸಾರ’ ತುಳು ನಾಟಕ ಪ್ರದರ್ಶನ.

Mumbai News Desk