ಮುಂಬೈನ ವಡಾಲಾ ಸ್ಪೋರ್ಟ್ಸ್ ಕ್ಲಬ್ನಲ್ಲಿ ಮಾರ್ಚ್ 15ರಂದು ಮೂಡುಬಿದ್ರೆ ಮಹಾವೀರ ಕಾಲೇಜಿನ ಹಳೆ ವಿದ್ಯಾರ್ಥಿಗಳ ಪ್ರಾಥಮಿಕ ಸಭೆ ನಡೆದು, ಸಭೆಯಲ್ಲಿ, 2026ರ ಏಪ್ರಿಲ್ ತಿಂಗಳಿನಲ್ಲಿ ನಡೆಯಲಿರುವ ಕಾಲೇಜಿನ ವಜ್ರ ಮಹೋತ್ಸವದ ಬಗ್ಗೆ ಚರ್ಚಿಸಲಾಯಿತು. ಈ ಕಾರ್ಯಕ್ರಮದ ಸಿದ್ಧತೆಗಾಗಿ ಮಾರ್ಚ್ 22ರ ಆದಿತ್ಯವಾರ ಸಂಜೆ 5:00 ಗಂಟೆಗೆ ಸಾಕಿನಾಕಾದ ‘ಪೆನಿನ್ಸುಲಾ ಗ್ರಾಂಡ್’ ಹೋಟೆಲ್ನಲ್ಲಿ ವಿಶೇಷ ಸಮಾಲೋಚನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳಾದ ಮೋಹನ್ದಾಸ್ ಶೆಟ್ಟಿ, ಸತೀಶ್ ಬಂಗೇರ, ಪದ್ಮರಾಜ್ ಹೆಗ್ಡೆ, ಮೋಹನ್ ಸುವರ್ಣ, ನಿರ್ಮಲಾ ಶೆಟ್ಟಿ, ಜಯ ಶೆಟ್ಟಿ, ಸುರೇಶ್ ಕಾಮತ್, ವಿಜಯ್ ಭಂಡಾರಿ ಮತ್ತು ಅಣ್ಣಿ ಶೆಟ್ಟಿ ಅವರು ಉಪಸ್ಥಿತರಿದ್ದು ಸಲಹೆಗಳನ್ನು ನೀಡಿದರು. ಮುಂಬೈನಲ್ಲಿರುವ ಹಳೆ ವಿದ್ಯಾರ್ಥಿಗಳನ್ನು ಒಗ್ಗೂಡಿಸುವ ಉದ್ದೇಶದಿಂದ ಮಾರ್ಚ್ 22ರ ಆದಿತ್ಯವಾರ ಸಮಾಲೋಚನಾ ಸಭೆ ನಡೆಯಲಿದ್ದು, ಕಾಲೇಜಿನ ಟ್ರಸ್ಟಿಗಳಾದ ಅಭಯಚಂದ್ರ ಜೈನ್, ಸುಚರಿತ ಶೆಟ್ಟಿ, ಪ್ರಾಂಶುಪಾಲರಾದ ಡಾ. ರಾಧಾಕೃಷ್ಣ ಶೆಟ್ಟಿ, ರಮೇಶ್ ಭಟ್ ಹಾಗೂ ಹರಿಪ್ರಸಾದ್ ನಾಯಕ್ ಮುಂತಾದ ಗಣ್ಯರು ಮುಂಬೈಗೆ ಭೇಟಿ ನೀಡಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಹಳೆ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ.




