.
.

ಶ್ರೀ ಕ್ಷೇತ್ರ ಬಪ್ಪನಾಡು ದೇವಸ್ಥಾನದ ಹಿರಿಮೆ ಸಾರುವ ದೃಶ್ಯ ಕಾವ್ಯದ ವೀಡಿಯೋ ಅಲ್ಬಮ್ ಎಪ್ರಿಲ್ 3 ರಂದು ಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆ ಗೊಂಡಿತು.ಬಪ್ಪನಾಡು ದುರ್ಗಾ ಪಾರಾಯಣ ಗ್ರೂಪ್ ಪ್ರಸ್ತುತಿಯಲ್ಲಿ, ಮೂಲ್ಕಿಯ ದುರ್ಗಾ ಸ್ಟುಡಿಯೋ ಸಂಕಲನದ ಭಕ್ತಿಗೀತೆಯ ಅಲ್ಬಮ್ ಅದಮಾರು ರಾಮಕೃಷ್ಣ ಭಟ್ ಬೆಂಗಳೂರು ಇವರಿಂದ ರಚಿಸಲ್ಪಟ್ಟ ಹಾಡಿಗೆ ಚಲನಚಿತ್ರ ಸಂಗೀತ ನಿರ್ದೇಶಕ ಶ್ರೀ ಭಾಸ್ಕರ ರಾವ್ ಬಿ.ಸಿ ರೋಡ್ ಅವರು ಸಂಗೀತ ನೀಡಿದ್ದು, ಮಂಗಳೂರಿನ ಮಹಿಳಾ ಶ್ರೀ ಸತ್ಯಸಾಯಿ ಸಂಸ್ಥೆಯ ಉತ್ತರ ವಿಭಾಗದ ಆಧ್ಯಾತ್ಮಿಕ ಸಂಯೋಜಕಿ ಮಂಜುಳಾ ಪ್ರಭಾಕರ್ ರಾವ್ ಅವರು ಧ್ವನಿ ನೀಡಿದ್ದಾರೆ.
ಈ ವಿಶೇಷ ಸಮಾರಂಭದಲ್ಲಿ ಕ್ಷೇತ್ರದ ಪ್ರಮುಖರಾದ ಶ್ರೀ ದುಗ್ಗಣ್ಣ ಸಾವಂತರು, ಅರಸರು ಮೂಲ್ಕಿ ಸೀಮೆ ಹಾಗೂ ಕ್ಷೇತ್ರದ ಕಾರ್ಯ ನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ,ಶಿಬರೂರು ವೇದಮೂರ್ತಿ ಗೋಪಾಲಕೃಷ್ಣ ತಂತ್ರಿ, ಸರೋಜಿನಿ ಸುವರ್ಣ, ನಾಗೇಶ್ ಬಪ್ಪನಾಡು, ರಾಧಾ ಎಚ್ ಭಟ್, ನಾಗರಾಜ ಹೆಜಮಾಡಿ, ರಾಮಚಂದ್ರ ಬಪ್ಪನಾಡು, ಶ್ರೀನಿವಾಸ ಬಪ್ಪನಾಡು, ಪ್ರಥಮ್ ಎಸ್ ಬಪ್ಪನಾಡು, ಬಿ ಕೆ ಶೆಟ್ಟಿ ಅವರು ಅತಿಥಿಗಳಾಗಿ ಭಾಗವಹಿಸಿದ್ದರು .ಈ ಯೋಜನೆಯು ನಾಗೇಶ್ ಬಪ್ಪನಾಡು ಅವರ ಸಂಯೋಜನೆ ಭಕ್ತಿ ಮತ್ತು ಸಂಗೀತದ ಈ ಅಪೂರ್ವ ಸಂಗಮವನ್ನು ಕಣ್ತುಂಬಿಕೊಳ್ಳಲು ಭಕ್ತಾಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.





