
ಹೆಜಮಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ವಾರ್ಷಿಕ ನೇಮದ ದಿನ ಕಮಲ ಎಂಬ ಹೆಂಗಸಿನ ಕುತ್ತಿಗೆಯಿಂದ ಚಿನ್ನದ ಸರ ಕಳವು ಆಗಿ 24 ಗಂಟೆ ಯಲ್ಲಿ ಪುತ್ತೂರು ನಲ್ಲಿ ಕಳ್ಳರನ್ನು ಹಿಡಿದ ವಿಷಯ ಕಳೆದ ಜನವರಿಯಲ್ಲಿ ಬಾರಿ ಸುದ್ದಿಯಾಗಿತ್ತು. ಕೋರ್ಟ್ ಆದೇಶದಂತೆ ಪಡುಬಿದ್ರಿ ಪೊಲೀಸ್ ಇನ್ಸ್ಪೆಕ್ಟರ್ ಶಕ್ತಿ ವೇಲು ಕಮಲ ಇವರಿಗೆ ಮೇ 10 ರಂದು ಸರವನ್ನು ಹೆಜಮಾಡಿ ಗರಡಿಯಲ್ಲಿ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷ ಮೋಹನ್ ದಾಸ್ ಹೆಜ್ಮಾಡಿ, ಹೆಜಮಾಡಿ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಶ್ವರ ದಯಾನಂದ ಹೆಜಮಾಡಿ, ಗರಡಿ ಅರ್ಚಕ ಗುರುರಾಜ್ ಪೂಜಾರಿ, ಕಾರ್ಯದರ್ಶಿ ಪ್ರಭೋದ್ ಚಂದ್ರ ಹೆಜಮಾಡಿ, ಮಾಧವ ಸನೀಲ್, ಮಾಜಿ ಅಧ್ಯಕ್ಷ ದೊಂಬ ಕೆ ಪೂಜಾರಿ, ಚೆನ್ನಪ್ಪ ಸುವರ್ಣ, ದೀಪಕ್ ಕೋಟಿಯನ್ ನಡೀಕುದ್ರು ಮೊದಲಾದವರು ಉಪಸ್ಥಿತರಿದ್ದರು.




