ಮುಂಬಯಿ:ಮಲಾಡ್ ಪೂರ್ವಗೋವಿಂದ ನಗರದ ಇರಾನಿ ಕಾಲೋನಿಯ, ಶನಿ ಮಂದಿರದ
ಬಳಿಯ ನಿವಾಸಿ ವಿನುತಾ ರಾವ್ (ರೇಖಾ)(57) ಜೂ.26 ರಂದು ನಿಧನರಾಗಿದ್ದಾರೆ.
ಮೃತರು ಪತಿ,ಶನಿ ಮಂದಿರದ ಹಿರಿಯ ಸದಸ್ಯ
ಉಮನಾಥ್ ರಾವ್ , ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಅಂತ್ಯಕ್ರಿಯೆಯು ಭಾನುವಾರ ಬೆಳಿಗ್ಗೆ 10:00 ಗಂಟೆಗೆ ನಡೆಯಲಿದೆ.
ವಿನುತಾ ರಾವ್ (ರೇಖಾ) ಅವರ ನಿಧನಕ್ಕೆ ಶ್ರೀ ಶನಿ ಮಹಾತ್ಮ ಪೂಜಾ ಸಮಿತಿಯ ಅಧ್ಯಕ್ಷರಾದ ಮೋಹನ್ ಬಂಗೇರ ಮತ್ತು ಪದಾಧಿಕಾರಿಗಳು ಹಾಗೂ ಕುಮಾರ ಕ್ಷತ್ರಿಯ ಸಂಘ ಮುಂಬಯಿ ಅಧ್ಯಕ್ಷರಾದ ಎಂ ಡಿ ರಾವ್ ಮತ್ತು ಪದಾಧಿಕಾರಿಗಳು ದುಃಖ ಸಂತಾಪ ಸೂಚಿಸಿದ್ದಾರೆ.




