July 23, 2026
Mumbai News Kannada
ಮುಂಬಯಿ

ಸದ್ಗುರು ಶ್ರೀ ಅನಿರುದ್ಧ ಉಪಾಸನಾ ಟ್ರಸ್ಟಿನ ಮೀರಾರೋಡ್ ಉಪಾಸನಾ ಕೇಂದ್ರದ ವತಿಯಿಂದ ರಕ್ತದಾನ ಶಿಬಿರ.








ವರದಿ: ಉಮೇಶ್ ಕೆ.ಅಂಚನ್.

ಮುಂಬಯಿ, ಡಿ.5: ಅನಿರುದ್ಧ ಉಪಾಸನಾ ಟ್ರಸ್ಟಿನ ಮೀರಾರೋಡ್ ಕನ್ನಡ ಮತ್ತು ಮರಾಠಿ ಉಪಾಸನಾ ಕೇಂದ್ರದ ವತಿಯಿಂದ ಡಿ.3ರಂದು ಮೀರಾರೋಡ್ ಪೂರ್ವದ ಪೆಣ್ಕರ್ವಾಡಾ ಸಾಯಿಬಾಬಾ ಮಂದಿರದ ವಠಾರದಲ್ಲಿ ರಕ್ತ ದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರವು
ಮೀರಾರೋಡ್ ರಾಜೀವ್ ಗಾಂಧಿ ಬ್ಲಡ್ ಬ್ಯಾಂಕಿನ ಸುಮಾರು 12 ಮಂದಿ ಸಿಬ್ಬಂದಿಗಳೊಂದಿಗೆ ಡಾ.ಉಮೇಶ್ ಶಿರೋಡ್ಕರ್ ರವರ ಮೇಲ್ವಿಚಾರಣೆಯಲ್ಲಿ ಬೆಳಿಗ್ಗೆ ಗಂಟೆ 9ರಿಂದ ಸಾಯಂಕಾಲ 5 ಗಂಟೆಯ ತನಕ ನಡೆಯಿತು. ಈ ಶಿಬಿರದಲ್ಲಿ ಸುಮಾರು 150 ಮಂದಿ ರಕ್ತ ದಾನ ಮಾಡಿ 113 ಯೂನಿಟ್ ರಕ್ತ ಸಂಗ್ರಹವಾಗಿತ್ತು. ಇದೇ ರೀತಿ ಮುಂಬಯಿ ಆಸಪಾಸಿನ ಒಟ್ಟು 25 ಉಪಾಸನಾ ಕೇಂದ್ರಗಳಲ್ಲಿ ಶಿಬಿರವು ನಡೆದಿದ್ದು ಸುಮಾರು 2739 ಯೂನಿಟ್ ರಕ್ತವು ಸಂಗ್ರಹಣೆ ಆಗಿದೆ ಎಂದು ಸಂಸ್ಥೆಯ ಮೂಲದಿಂದ ತಿಳಿದು ಬಂದಿದೆ.

.

.

.

.

.



Related posts

‘ಶ್ರೀ ರಾಮ ಕಥಾ ಹೃದಯಂ‌’ ಸರಣಿ ತಾಳಮದ್ದಳೆಯ ನಾಲ್ಕನೇ ಪ್ರಸ್ತುತಿ

Mumbai News Desk

ಶ್ರೀ ಶನೀಶ್ವರ ಮಂದಿರ ಭಟ್ಟಿಪಾಡ, ಇದರ 41ನೇ ವಾರ್ಷಿಕ ಮಹಪೂಜೆ ಸಂಪನ್ನ

Mumbai News Desk

ಎಸ್.ಎಸ್.ಸಿ ಪರೀಕ್ಷೆಯಲ್ಲಿ ಸಾನ್ವಿ ಸುರೇಶ್ ಪೂಜಾರಿಗೆ ಶೇ.91.60 ಅಂಕ.

Mumbai News Desk

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ: ನವಿ ಮುಂಬಯಿ ಶಾಖೆಯಲ್ಲಿ ದೀಪಾವಳಿಯ ಸಂಭ್ರಮಾಚರಣೆ

Mumbai News Desk

ಶ್ರೀ ಮಹಾವಿಷ್ಣು ಮಂದಿರ ಡೊಂಬಿವಲಿ ಸಂಚಾಲಕರು ಶ್ರೀ ಮುಂಬ್ರಾ ಮಿತ್ರ ಭಜನಾ ಮಂದಿರ – 47 ನೇ ವಾರ್ಷಿಕ ಮಹಾ ಸಭೆ

Mumbai News Desk

ಮಲಾಡ್ ಶ್ರೀ ವರಮಹಾಲಕ್ಷ್ಮೀ  ಪೂಜಾ ಸಮಿತಿಯಿಂದ 16 ನೇ ವಾರ್ಷಿಕ  ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ, ಧಾರ್ಮಿಕ ಸಭೆ

Mumbai News Desk