September 6, 2026
Mumbai News Kannada
ಪ್ರಕಟಣೆ

ಡಿ.17 ರಿಂದ 21 ರ ವರಗೆ ತುಳುನಾಡಿನ ವಿವಿಧ ಪುಣ್ಯ ಕ್ಷೇತ್ರ ಗಳಲ್ಲಿ ಮುಂಬಯಿಯ ಶ್ರೀ ಉಮಾ ಮಹೇಶ್ವರಿ ಭಜನಾ ಮಂಡಳಿ ಯಿಂದ ಭಜನಾ ಕಾರ್ಯಕ್ರಮ.





ಮುಂಬಯಿಯ ಪ್ರಸಿದ್ಧ ಭಜನಾ ಮಂಡಳಿಗಳಲ್ಲಿ ಒಂದಾಗಿರುವ ಶ್ರೀ ಉಮಾ ಮಹೇಶ್ವರಿ ಭಜನಾ ಮಂಡಳಿ ಜರಿಮರಿ ಇದರ ಸದಸ್ಯರು ಭುವಾಜಿ ರವೀಂದ್ರ ಶಾಂತಿ ಯವರ ನೇತೃತ್ವದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪುಣ್ಯ ಕ್ಷೇತ್ರಗಳಲ್ಲಿ ಹರಿನಾಮ ಸಂಕೀರ್ತನೆ ಭಜನೆ ಕಾರ್ಯಕ್ರಮ ವನ್ನು ನಡೆಸಿ ಕೊಡಲಿರುವರು.

ಡಿಸೆಂಬರ್ 17 ರಂದು ಬೆಳಿಗ್ಗೆ 11.00 ರಿಂದ 1.00 ರ ವರಗೆ ಶ್ರೀ ಕ್ಷೇತ್ರ ದುರ್ಗಾಪರಮೇಶ್ವರಿ ದೇವಸ್ಥಾನ ಮುಂಡ್ಕೂರು, ಸಂಜೆ 5.00 ರಿಂದ 7.00 ರ ವರಗೆ ಶ್ರೀ ಕ್ಷೇತ್ರ ಕೊಡ್ಯಡ್ಕ, ಡಿ. 18 ರಂದು ಬೆಳಿಗ್ಗೆ 6.00 ರಿಂದ 8.00 ರ ವರಗೆ ಶ್ರೀ ಮಹಾ ವಿಷ್ಣು ಮಂದಿರ ಪುತ್ತೂರು, 11.30 ರಿಂದ 1.30 ರ ವರಗೆ ಶ್ರೀ ಕ್ಷೇತ್ರ ಹನುಮಗಿರಿ, ಸಂಜೆ 4.30 ರಿಂದ 6.30 ಶ್ರೀ ಕ್ಷೇತ್ರ ಕಬತಾರ್, ಡಿ.19 ರಂದು ಬೆಳಿಗ್ಗೆ10.00 ರಿಂದ 12.00 ರ ವರಗೆ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಉಚ್ಚಿಲ, ಮದ್ಯಾಹ್ನ 2.00 ರಿಂದ 3.00 ರ ವರಗೆ ಶ್ರೀ ಮಾರಿಯಮ್ಮ ದೇವಸ್ಥಾನ ಕಾಪು, 4.00 ರಿಂದ 5.00 ರ ವರಗೆ ಶ್ರೀ ಕೃಷ್ಣ ಮಠ ಉಡುಪಿ, ಸಂಜೆ 6.00 ರಿಂದ 7.00 ಶ್ರೀ ಕ್ಷೇತ್ರ ಅಂಬಲ್ಪಾಡಿ, ಡಿ.20 ರಂದು ಬೆಳಿಗ್ಗೆ 10.00 ರಿಂದ 12.00 ರ ವರಗೆ ಶ್ರೀ ವಿಷ್ಣು ದೇವಸ್ಥಾನ ಶಕ್ತಿ ನಗರ ಮಂಗಳೂರು, ಮಧ್ಯಾಹ್ನ 2.00 ರಿಂದ 3.30 ರ ವರಗೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಟೀಲು, ಸಂಜೆ 5.00 ರಿಂದ 6.30 ಶ್ರೀ ಭಗವತಿ ದೇವಸ್ಥಾನ ಸಶಿಹಿತ್ಲು, ಡಿ.21 ರಂದು ಬೆಳಿಗ್ಗೆ 10 ರಿಂದ 11.30 ರ ವರಗೆ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಮಣಿಲ, ಮುಂತಾದ ಕ್ಷೇತ್ರಗಳಲ್ಲಿ ಭಜನಾ ಕಾರ್ಯಕ್ರಮ ನಡೆಯಲಿದೆ.

ಉಮಾ ಮಹೇಶ್ವರಿ ಮಂದಿರದ ಆಡಳಿತ ಮೊಕ್ತೇಸರರಾದ ಶ್ರೀಮತಿ ಬಿ. ಕೆ. ಲಲಿತಾ ಶೀನ, ಹಿರಿಯರಾದ ಬಿ. ಎನ್. ಶೆಟ್ಟಿ, ಪ್ರಧಾನ ಅರ್ಚಕರಾದ ಶ್ರೀನಿವಾಸ ಉಡುಪ ಈ ಭಜನಾ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲಿ ಎಂದು ದೇವರಲ್ಲಿ ಪ್ರಾರ್ಥಿಸಿ, ಭಜನಾ ತಂಡಕ್ಕೆ ಶುಭ ಕೋರಿದರು.

.

.



Related posts

ಪಾಂಗಾಳ: ಮಾ. 2ರಿಂದ 4ರವರೆಗೆ ಸಿರಿ ಕುಮಾರ ಬ್ರಹ್ಮಲಿಂಗೇಶ್ವರ ಆದಿ ಆಲಡೆ ಆಯನ ಸಿರಿಜಾತ್ರೆ

Mumbai News Desk

ಶ್ರೀ ಶನೇಶ್ವರ ಚಾಮುಂಡೇಶ್ವರಿ ಅಯ್ಯಪ್ಪ ಭಕ್ತವೃಂದ ಫೌಂಡೇಶನ್ ಸಾಯನ್ – ಕೋಲಿವಾಡ, ಡಿ  25.ರಂದು 21ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಗುರುವಂದನೆ.

Mumbai News Desk

ಜ. ‌26 ರಂದು” ‘ಮುಲುಂಡ್  ಪಶ್ಚಿಮದಲ್ಲಿ *ಲಗ್ನಾ  ಪಿಶ್ಶ್ಯೆ’  ,ಕೊಂಕಣಿ ನಾಟಕ

Mumbai News Desk

ಜೂನ್ 13ರಂದು ಡೊಂಬಿವಲಿಯಲ್ಲಿ ಉಚಿತ ಡಯಾಲಿಸಿಸ್ ಯಂತ್ರ ಹಾಗೂ ರಿಯಾಯಿತಿ ದರದ ಆರೋಗ್ಯ ಸೇವೆಗಳ ಉದ್ಘಾಟನೆ

Mumbai News Desk

ಮೇ 15: ಭಾರತ್ ಬ್ಯಾಂಕ್ ನ ಕಾರ್ಯಧ್ಯಕ್ಷ ಸೂರ್ಯಕಾಂತ್ ಜೆ ಸುವರ್ಣ ಅವರ 50ನೇ ಹುಟ್ಟುಹಬ್ಬ ಆಚರಣೆ.

Mumbai News Desk

ಮಲಾಡ್ ಪೂರ್ವ ಶ್ರೀ ದೇವಿ ಮಹಾಮ್ಮಾಯಿ ದೇವಸ್ಥಾನದಲ್ಲಿ ಸೆ. 22 ರಿಂದ ಅ. 2ರ ವರೆಗೆ ನವರಾತ್ರಿ ಉತ್ಸವ

Mumbai News Desk