July 23, 2026
Mumbai News Kannada
ಪ್ರಕಟಣೆ

ಮಕರ ಜ್ಯೋತಿ ಫೌಂಡೇಶನ್ ಸಯನ್ ಕೋಲಿವಾಡ – ಜೂನ್ 30ರಂದು ಪುಸ್ತಕ ವಿತರಣೆ, ಅಭಿನಂದನಾ ಕಾರ್ಯಕ್ರಮ







ಸಯನ್ -ಕೊಲಿವಾಡ ಪರಿಸರದ ಧಾರ್ಮಿಕ, ಸಾಮಾಜಿಕ ಸಂಸ್ಥೆ ಮಕರ ಜ್ಯೋತಿ ಫೌಂಡೇಶನ್ ಆಶ್ರಯದಲ್ಲಿ ನೋಟ್ ಬುಕ್ ವಿತರಣೆ ಹಾಗೂ ಅಭಿನಂದನಾ ಕಾರ್ಯಕ್ರಮ ಜೂನ್ 30ರಂದು, ಸಂಜೆ 6.30ಕ್ಕೆ, ಅಂಟಾಪ್ ಹಿಲ್ ನ ಎನ್ ಎಸ್ ಕ್ಲಾಸ್ ನಲ್ಲಿ ಜರಗಲಿದೆ. ಮುಖ್ಯ ಅತಿಥಿಗಳಾಗಿ ಕನ್ನಡ ಸಂಘ ಸಯನ್ ನ ಉಪಾಧ್ಯಕ್ಷ ಸದಾಶಿವ ಶೆಟ್ಟಿ, ಸಂಸ್ಥಾಪಕ ಹ್ಯಾರಿ ಸೀಕ್ವೆರ, ಸಂಘದ ಗೌರವಾಧ್ಯಕ್ಷರಾದ ಮಾಧವ ಮೇಸ್ತ ಶಿರೂರು, ಅಸೋಸಿಯೇಶನ್ ಆಫ್ ಇಂಡಿಯಾ ಕಾಂಟ್ರಾಕ್ಟ್ ನ ಅಧ್ಯಕ್ಷರಾದ ಸಂತೋಷ ಜಾಧವ, ಸಂಘದ ಸದಸ್ಯರಾದ ಬಾಲಚಂದ್ರ ದೇವಾಡಿಗ ಹಾಗೂ ಈಶ್ವರ ದೇವಾಡಿಗ, ಸಾಹಿತಿ ಮತ್ತು ನಾಟಕ ಕಲಾವಿದರು
ಗೋಪಾಲ್ ತ್ರಾಸಿ ಆಗಮಿಸಲಿರುವರು.


ಈ ಸಂಧರ್ಭ ಕರುನಾಡ ಸಿರಿ ಸಂಸ್ಥೆಯ ಅಧ್ಯಕ್ಷರಾದ ಬಾಲಚಂದ್ರ ದೇವಾಡಿಗ ಅವರನ್ನು ಸನ್ಮಾನಿಸಲಾಗುವುದು. ಹಾಗೂ ಈ ಬಾರಿಯ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಪನಸೂಲ್ ದೇವಾಡಿಗ ಹಮು ಗೌಡ ಹಾಗೂ ಧ್ಯಾನ್ ಗೌಡ ಇವರನ್ನು ಅಭಿನಂದಿಸಲಾಗುವುದು.
ಶ್ರೀಮತಿ ಮಾಲಾ ಮಾಧವ ಮೇಸ್ತ ಕಾರ್ಯಕ್ರಮ ನಿರೂಪಣೆ ಮಾಡಲಿರುವರು.
ಪರಿಸರದ ತುಳು – ಕನ್ನಡಿಗರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವಂತೆ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ವಿನಂತಿಸಿದ್ದಾರೆ.



Related posts

     ಜೂ  ೧೬ :  ಶನಿ ಮಹಾತ್ಮ ಚಾರಿಟೇಬಲ್ ಸೊಸೈಟಿ ವತಿಯಿಂದ ವಿದ್ಯಾರ್ಥಿಗಳಿಗೆ   ಪುಸ್ತಕ,   ಸಾಮಗ್ರಿಗಳ  ವಿತರಣೆ

Mumbai News Desk

ಡಿ. 3 : ಕುಲಾಲ ಸಂಘ ಮುಂಬಯಿ ಮೀರಾ ರೋಡ್ – ವಿರಾರ್ ಸ್ಥಳೀಯ ಸಮಿತಿಯ ವಾರ್ಷಿಕ ಸ್ನೇಹ ಸಮ್ಮಿಲನ – ಸನ್ಮಾನ – ಯಕ್ಷಗಾನ-ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk

ತುಳು ಸಂಘ ಬೊರಿವಲಿ  ಸೆ. 19 ರಂದು  15ನೇ  ವಾರ್ಷಿಕ ಮಹಾಸಭೆ

Mumbai News Desk

ಪೆ 4:   ಮಲಾಡ್ ಶ್ರೀ   ಮಹತೋಭಾರ ಶನೀಶ್ವರ ದೇವಸ್ಥಾನ  ದಸುವರ್ಣ ಸಂಭ್ರಮದ  ಕಾರ್ಯಕ್ರಮ ಸಮಾಲೋಚನಾ ಸಭೆ

Mumbai News Desk

ಗುರುನಾರಾಯಣ ಯಕ್ಷಗಾನ ಮಂಡಳಿಯ ಭಾಗವತರಾದ ಗಂಗಾಧರ್ ಸುವರ್ಣ ಅವರ ಕಲಾ ಸೇವೆಗೆ 25 ವರ್ಷ, ಆಗಸ್ಟ್ 2ರಂದು ”ಯಕ್ಷ ಸಂಭ್ರಮ’

Mumbai News Desk

ಕರ್ನಾಟಕ ಸಂಘ, ಕಲ್ಯಾಣ: ನ.23 ರಂದು ಕರ್ನಾಟಕ ರಾಜ್ಯೋತ್ಸವ ಮತ್ತು 23ನೇ ವಾರ್ಷಿಕೋತ್ಸವ

Mumbai News Desk