
ಕುರ್ಲಾ ಪಶ್ಚಿಮ, ಜರಿಮರಿ ಪರಿಸರದ ತುಳು-ಕನ್ನಡಿಗರು ಸ್ಥಾಪಿಸಿದ “ಕನ್ನಡ ವೆಲ್ಫೇರ್ ಸಂಘ”, ಇದರ ಉದ್ಘಾಟನಾ ಸಮಾರಂಭ ಜೂನ್ 8ರಂದು ಜರಿಮರಿ ಭಾಜಿ ಮಾರ್ಕೆಟ್ ಬಳಿಯ ಸಂಘದಲ್ಲಿ ರವಿವಾರ ನಡೆಯಲಿದೆ. ನೂತನ ಸಂಘವನ್ನು ಚಾಂದಿವಲಿ ಕ್ಷೇತ್ರದ ಜನಪ್ರಿಯ ಶಾಸಕರಾದ ದಿಲೀಪ್ (ಮಾಮಾ)ಲಾಂಡೆ ಉದ್ಘಾಟಿಸಲಿರುವರು.
ಕಾರ್ಯಕ್ರಮದ ವಿವರ :
ಬೆಳಿಗ್ಗೆ 6 ಗಂಟೆಗೆ : ಗಣಹೋಮ
ಸಾಯಂಕಾಲ 4ರಿಂದ 6ರ ತನಕ : ಶ್ರೀ ಸತ್ಯನಾರಾಯಣ ಮಹಾಪೂಜೆ
ಸಂಜೆ 6ರಿಂದ 8ರ ತನಕ : ಉದ್ಘಾಟನಾ ಸಮಾರಂಭ.
ಕೊನೆಯಲ್ಲಿ ಅನ್ನ ಸಂತರ್ಪಣೆ ನಡೆಯಲಿದೆ.
ತುಳು- ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ತೀರ್ಥ ಪ್ರಸಾದ ಸ್ವೀಕರಿಸಿ ಕಾರ್ಯಕ್ರಮವನ್ನು ಚಂದಗಾಣಿಸಿ ಕೊಡಬೇಕೆಂದು ಸಂಘದ ಅಧ್ಯಕ್ಷರಾದ ಜಯರಾಮ ಶೆಟ್ಟಿ, ಕಾರ್ಯದರ್ಶಿ ಸತೀಶ್ ಶೆಟ್ಟಿ, ಕೋಶಾಧಿಕಾರಿ ಸುಧಾಕರ್ ಶೆಟ್ಟಿ ಮತ್ತು ಪದಾಧಿಕಾರಿಗಳು, ಸಮಿತಿಯ ಸರ್ವ ಸದಸ್ಯರು ವಿನಂತಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ : 8169119617 /9892614371, 9004987011 ಸಂಪರ್ಕಿಸಬಹುದು.




