July 23, 2026
Mumbai News Kannada
ಸುದ್ದಿ

ನಮೋ ಮೋಯರ್ ಗ್ಲೋಬಲ್ ಫೌಂಡೇಶನ್ ವತಿಯಿಂದ ಉದ್ಯಾವರ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗುವ ಮುದ್ರಣ ಯಂತ್ರ ಕೊಡುಗೆ







ಮುಂಬಯಿ : ಶ್ರೀ ಭಗವತೀ ಕಿರಿಯ ಪ್ರಾಥಮಿಕ ಶಾಲೆಗೆ ಮಕ್ಕಳ ವಿದ್ಯಾ ಭ್ಯಾಸಕ್ಕೆ ಪೂರಕವಾಗುವ ದೃಷ್ಟಿಯಿಂದ ಒಂದು ಮುದ್ರಣ ಯಂತ್ರ (ಪ್ರಿಂಟರ್) ನ್ನು ಶಾಲಾ ಆಡಳಿತ ಮಂಡಳಿಗೆ,ಶಾಲಾ ಮುಖ್ಯ್ಯೊಪಾಧ್ಯಾಯರ ಉಪಸ್ಥಿಯಲ್ಲಿ ದಿನಾಂಕ 29.08.2025 ರಂದು
ನೀಡಲಾಯಿತು. ಕಳೆದ ವರ್ಷ ನಮೋ ಮೋಯರ್ ಗ್ಲೋಬಲ್ ಫೌಂಡೇಶನ್ ವತಿಯಿಂದ ಕಂಪ್ಯೂಟರನ್ನು ನೀಡಿದ್ದು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಬೇಕಾದ ಕೆಲವು ಪರಿಕರಗಳನ್ನು ಕೊಟ್ಟು ಸಹಕರಿಸಿದ್ದಾರೆ. ಶಾಲೆಯಲ್ಲಿ ಓಣಂ ಪ್ರಯುಕ್ತ ವಿಶೇಷವಾಗಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ನಮೋ ಮೋಯರ್ ಗ್ಲೋಬಲ್ ಫೌಂಡೇಶನ್ ನ ಅಧ್ಯಕ್ಷ ರವಿ ಉಚ್ಚಿಲ್ ಮುಂಬಯಿ ಇವರು ಫೌಂಡೇಶನ್ ನ ಕಾರ್ಯಕ್ಷಮತೆಯನ್ನು ಪ್ರಸ್ತಾಪಿಸಿ ಅನೇಕ ದಶಕಗಳನ್ನು ಕಂಡ ಶಾಲೆಯ ಉಳಿವಿಕೆಗಾಗಿ ನಮ್ಮ ಶ್ರಮ ನಿರಂತರವಾಗಿ ಇರಲಿದೆ, ಗ್ಲೋಬಲ್ ಫೌಂಡೇಶನ್ ಪ್ರಪಂಚದಾಧ್ಯoತ ಒಂದು ವಿಭಿನ್ನ ಸಂಸ್ಥೆಯಾಗಿ ರೂಪುಗೊಳ್ಳಲಿದೆ ಎಂದು ಸಂಸ್ಥೆಯ ಬಗ್ಗೆ ವಿವರಣೆ ನೀಡಿದರು, ಸಂಸ್ಥೆಯ ಮಂಗಳೂರು ದಕ್ಷಿಣ ವಲಯ ಸದಸ್ಯೆರಾದ ಪಾವನ ಟೀಚರ್ ಕೋಟೆಕಾರ್ ಇವರು ಶಾಲಾ ಹಳೆ ವಿದ್ಯಾರ್ಥಿಯಾಗಿದ್ದು ಶಾಲೆ ಬಗ್ಗೆ ಮೆಚ್ಚುಗೆ ಮಾತನ್ನು ಆಡಿದರು. ಉದ್ಯಾವರ ಭಗವತಿ ಕ್ಷೇತ್ರದ ಮೊಕ್ತೇಸರರಾದ ರಘುಕಾರ್ಣವರು ಶಾಲೆಯ ಮೇಲೆ ಇಟ್ಟಿರುವ ಪ್ರೀತಿ ಹಾಗೂ ನಮೋ ಗ್ಲೋಬಲ್ ಫೌಂಡೇಶನ್ ಸಂಸ್ಥೆಯ ಮೇಲಿನ ನಂಬಿಕೆಯನ್ನು ಶ್ಲಾ ಗಿಸಿದರು. ನವೀನ್ ಬೆಳ್ಚಪ್ಪಾಡ ಅಡ್ಕ ಇವರು ಗ್ಲೋಬಲ್ ಫೌಂಡೇಶನ್ ನಾ ಕಾರ್ಯಕ್ಷಮತೆ ಬಗ್ಗೆ ವಿವರಿಸಿದರು. ಶ್ರೀಮತಿ ಚಂಚಲಾಕ್ಷಿ ಟೀಚರ್ ಇವರು ವಿದ್ಯಾರ್ಥಿಗಳಿಗೆ ಹಿತವಚನವನ್ನು ನೀಡಿದರು. ಶ್ರೀಮತಿ ಅಮಿತಾ ಟೀಚರ್ ಅವರು ಕಂಪ್ಯೂಟರ್ ಹಾಗೂ ಮುದ್ರಣ ಯಂತ್ರವನ್ನು ನೀಡಿದ ಬಗ್ಗೆ ವಿದ್ಯಾರ್ಥಿಗಳು ಹೇಗೆ ಅದರ ಸದುಪಯೋಗ ಪಡೆಯಬಹುದು ಎಂಬುದನ್ನು ವಿವರಿಸಿದರು ಉದ್ಯಾವರ ಶ್ರೀ ಭಗವತಿ ಕ್ಷೇತ್ರದ ಅಧ್ಯಕ್ಷರಾಗಿರುವಂತಹ ಕೃಷ್ಣಪ್ಪ ಬೆಂಗರೆ ಇವರು ಪ್ರಸ್ತುತ ಇರುವ ಶಾಲೆಯ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಮಕ್ಕಳ ಮುಂದಿನ ಪೀಳಿಗೆಯ ಬಗ್ಗೆ ಹಾಗೂ ಶಾಲೆಯ ಮುಂದಿನ ದುರಸ್ತೀಕರಣದ ಬಗ್ಗೆ ಪ್ರಸ್ತಾಪಿಸಿದರು, ನಮೋ ಮೋಯರ್ ಗ್ಲೋಬಲ್ ಫೌಂಡೇಶನ್ ಸಂಸ್ಥೆಯನ್ನು ಶ್ಲಾಘಿಸಿದರು .

ಶಾಲಾ ಕ್ರೀಡಾ ಅಧ್ಯಾಪಕಿ ಆಗಿರುವಂತಹ ಶ್ವೇತಾ ರಾಜೇಶ್ ಉದ್ಯಾವರ್ ಇವರು ವಿದ್ಯಾರ್ಥಿಗಳಿಗೆ ಬಗ್ಗೆ ಶುಭ ಸಂದೇಶವನ್ನು ನೀಡಿದರು. ನಮೋ ಮೋಯರ್ ಗ್ಲೋಬಲ್ ಫೌಂಡೇಶನ್ನ ಅಧ್ಯಕ್ಷರಾದ ರವಿ, ಇವರ ಧರ್ಮಪತ್ನಿ ಶ್ರೀಮತಿ ಸೌಮ್ಯ ರವಿ ಉಚ್ಚಿಲ್ ಸಕ್ರಿಯ ಸದಸ್ಯರಾದ , ಸಂದೇಶ ಐಲ್, ಶ್ರೀಮತಿ ಶಾಲಿನಿ ಕೃಷ್ಣಪ್ಪ ಬೆಂಗರೆ, ಉದ್ಯಾವರ ಭಗವತೀ ಕ್ಷೇತ್ರದ ಕಾರ್ಯದರ್ಶಿ ವಿಶ್ವನಾಥ ಪಿ,ಉದ್ಯಾವರ ಶಾಲಾ ಪ್ರಬಂಧಕರು ಶ್ರೀನಿವಾಸ್ ಉದ್ಯಾವರ, ಶಾಲಾ ಸಮಿತಿ ಸದಸ್ಯ ವಿಶ್ವನಾಥ ಸಿ, ಇವರೆಲ್ಲರೂ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಗೀತಾ ಎಚ್ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲಾ ಅಧ್ಯಾಪಕಿ ರಮ್ಯಾ ಇವರು ಮುಕ್ತಾಯದ ಧನ್ಯವಾದಗಳನ್ನು ಸಮರ್ಪಿಸಿದರು. ಶಾಲಾ ಪೋಷಕರು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಕೇರಳದ ಪ್ರಸಿದ್ಧ ಓಣಂ ಹಬ್ಬವನ್ನು ಆಚರಿಸುವುದರ ಮೂಲಕ ಪ್ರತಿಯೊಬ್ಬರಿಗೂ ಸಿಹಿ ಊಟವನ್ನು ನೀಡಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.



Related posts

ಭಾಯಂದರ್:ಸ್ನೇಹಲತಾ ವಿಶ್ವನಾಥ ಪೂಜಾರಿ ನಿಧನ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಧನ ಸಹಾಯ

Mumbai News Desk

ನಾಸಿಕ್‌ನಲ್ಲಿ ಮುಂಬಯಿ ಕುಲಾಲ ಸಂಘದ ಕುಲಾಲ ಭವನ ಉದ್ಘಾಟನೆಯ ಆಮಂತ್ರಣ ಪತ್ರಿಕೆ ವಿತರಣೆ

Mumbai News Desk

ಲಾಲ್ ಕೃಷ್ಣ ಅಡ್ವಾಣಿಗೆ ಭಾರತ ರತ್ನ, ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಅಭಿನಂದನೆ

Mumbai News Desk

ನಾನಿಲ್ತಾರ್ ಅಭಿಮಾನಿ ಬಳಗ ಮುಂಬೈ, ಮುಂಡ್ಕೂರು ವತಿಯಿಂದ ಏರ್ ಕಂಡಿಷನರ್ ಸ್ಫೋಟಗೊಂಡ ದುರ್ಘಟನೆಯಲ್ಲಿ ಮೃತರಾದ ತಾರಾನಾಥ ವಿ ಬಂಜನ್ ಅವರಿಗೆ ಶ್ರದ್ಧಾಂಜಲಿ.

Mumbai News Desk

ಅಕ್ಷರ ಕ್ರಾಂತಿಗೆ ಮುನ್ನುಡಿ ಬರೆದ ಉಡುಪಿ: ಕರ್ನಾಟಕದ ಮೊಟ್ಟಮೊದಲ ‘ಸಂಪೂರ್ಣ ಸಾಕ್ಷರ’ ಜಿಲ್ಲೆಯಾಗಿ ಉಡುಪಿ

Mumbai News Desk