
ಕಳೆದ ಎಂಟು ದಶಕಗಳಿಗೂ ಹೆಚ್ಚು ಸಮಯದಿಂದ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಗೈಯುತ್ತಾ ಮುಂಬಯಿ ಮಣ್ಣಿನಲ್ಲಿ ಕನ್ನಡದ ತೇರನ್ನು ಎಳೆಯುತ್ತಾ ಬಂದು ಅಪಾರ ಜನ ಮನ್ನಣೆಗಳಿಸಿರುವ ಮಾಟುಂಗಾ ಪೂರ್ವದ ಮುಂಬಯಿ ಕನ್ನಡ ಸಂಘದ 83ನೇ ವಾರ್ಷಿಕ ಮಹಾಸಭೆಯು ಇದೇ ಶನಿವಾರ ಸೆಪ್ಟೆಂಬರ್ 14, 2024 ರಂದು ಸಂಜೆ ಗಂಟೆ 5-00 ಕ್ಕೆ ಸಂಘದ ಸದ್ಯದ ಕಾರ್ಯಾಲಯವಾಗಿರುವ 2ಎ-ಸಾಯಿ ವಿಸಾವಾ ಕೋ-ಅಪರೇಟಿವ್ ಹೌಸಿಂಗ್ ಸೊಸೈಟಿ, ನಪ್ಪೂ ರಸ್ತೆ, ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ನ ಹಿಂದುಗಡೆ, ರುಯ್ಯಾ ಕಾಲೇಜಿನ ಬಳಿ, ಹಿಂದೂ ಕಾಲನಿ, ದಾದರ್ [ಪೂರ್ವ] ಮುಂಬಯಿ ಇಲ್ಲಿ ಸಂಘದ ಅಧ್ಯಕ್ಷರಾದ ಗುರುರಾಜ ಎಸ್.ನಾಯಕ್ರ ಅಧ್ಯಕ್ಷತೆಯಲ್ಲಿ ಜರಗಲಿದೆ.
ಮಹಾಸಜಭೆಯಲ್ಲಿ ಗತ ವರ್ಷದ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರಗಳ ಮಂಡನೆ ಮಾಡಲಾಗುತ್ತದೆ. ಅಲ್ಲದೆ ಸಂಘವು ಕಾರ್ಯಾಲಯವನ್ನು ಹೊಂದಲಿರುವ ನೂತನ ಕಟ್ಟಡದ ನಿರ್ಮಾಣ ಕಾರ್ಯವು ಮಾಟುಂಗಾ ಪೂರ್ವದ ಭಾವು ದಾಜಿ ರಸ್ತೆಯಲ್ಲಿ ಭರದಿಂದ ಸಾಗುತ್ತಿದ್ದು ಇನ್ನು ಒಂದೆರಡು ವರ್ಷಗಳಲ್ಲಿ ತಯಾರಾಗುವ ನಿರೀಕ್ಷೆ ಇದೆ. ಈ ನೂತನ ಕಾರ್ಯಾಲಯಕ್ಕಾಗಿ ಈಗಾಗಲೇ ನಿಧಿ ಸಂಗ್ರಹದ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದ್ದು ಈ ಕೆಲಸವನ್ನು ಇನ್ನಷ್ಟು ಚುರುಕುಗೊಳಿಸುವ ಸಲುವಾಗಿ ಮಹಾಸಭೆಯಲ್ಲಿ ಸದಸ್ಯರ ಸಲಹೆ ಸೂಚನೆಗಳನ್ನುಪಡೆದುಕೊಳ್ಳಲಾಗುತ್ತದೆ. ಹಾಗಾಗಿ ಸದಸ್ಯರು ಮಹಾಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ತಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನಿಡುವ ಜೊತೆಗೆ ಸಭೆಯ ಶೋಭೆಯನ್ನು ಹೆಚ್ಚಿಸಬೇಕಾಗಿ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸೋಮನಾಥ ಎಸ್,ಕರ್ಕೇರರು ವಿನಂತಿಸಿಕೊಳ್ಳುತ್ತಿದ್ದಾರೆ. ಹೆಚ್ಚಿನ ಮಾಹಿತಿ ಬೇಕಾದರೆ ಮತ್ತು ಕಟ್ಟಡ ನಿಧಿಗೆ ಧನ ಸಹಾಯ ಮಾಡಲಿಚ್ಛಿಸುವವರು ಮುಂಬಯಿ ಕನ್ನಡ ಸಂಘದ ಅಧ್ಯಕ್ಷರಾದ ಗುರುರಾಜ ಎಸ್.ನಾಯಕ್[ಮೊಬೈಲ್: 9819816380] ಕಾರ್ಯದರ್ಶಿ ಸೋಮನಾಥ ಎಸ್.ಕರ್ಕೇರ[ಮೊ:9819321186 ] ಮತ್ತು ಕಟ್ಟಡ ನಿಧಿ ಸಂಗ್ರಹಣಾ ಸಮಿತಿಯ ಅಧ್ಯಕ್ಷರಾದ ಸತೀಶ್ ಎನ್. ಬಂಗೇರ [ಮೊ:9769797495 ] ಇವರನ್ನು ಸಂಪರ್ಕಿಸಬಹುದು.
ವಿ.ಸೂ: ಮುಂಬಯಿ ಕನ್ನಡ ಸಂಘವು 900 ಕ್ಕೂ ಮಿಕ್ಕಿ ಸದಸ್ಯ ಸಂಪತ್ತನ್ನು ಹೊಂದಿದ್ದು, ಅವರಲ್ಲಿ ಅನೇಕರು ಸದ್ಯಕ್ಕೆ ಮುಂಬಯಿಯಿಂದ ಹೊರಗೆ ಬೆಂಗಳೂರು, ಚೆನ್ನೈ, ದುಬೈ, ಅಮೆರಿಕಾದಲ್ಲಿ ನೆಲೆಸಿರುವುದರಿಂದ ಅವರನ್ನು ಸಂಪರ್ಕಿಸಲು ಕಷ್ಟಸಾಧ್ಯವಾಗುತ್ತಿದೆ. ಹಾಗಾಗಿ ಅವರು ಅಥವಾ ಅವರ ಸಂಬಂಧಿಕರು ಸಂಘದ ಅಧ್ಯಕ್ಷರು, ಕಾರ್ಯದರ್ಶಿ ಅಥವಾ ಕಟ್ಟಡ ನಿಧಿ ಸಂಗ್ರಹಣಾ ಸಮಿತಿಯ ಅಧ್ಯಕ್ಷರನ್ನು ಈ ಮೇಲೆ ನಮೂದಿಸಿದ ನಂಬರ್ನಲ್ಲಿ ಸಂಪರ್ಕಿಸಬೇಕಾಗಿ ವಿನಂತಿ.




