September 6, 2026
Mumbai News Kannada
ಸುದ್ದಿ

ಕುಂಬಳೆ : ಡಿವೈಎಫ್ಐ ಪ್ರ‌ಮುಖ ನಾಯಕಿ, ಯುವ ನ್ಯಾಯವಾದಿ ರಂಜಿತಾ ಆತ್ಮಹತ್ಯೆಗೆ ಶರಣು





ಕುಂಬಳೆಯ ಡಿವೈಎಫ್ಐ ಪ್ರ‌ಮುಖ ನಾಯಕಿ, ಮಹಿಳಾ ಅಸೋಸಿಯೇಷನ್ ಏರಿಯಾ ಸಮಿತಿ ಅಧ್ಯಕ್ಷೆ, ಖ್ಯಾತ ಯುವ ನ್ಯಾಯವಾದಿ ಕುಂಬಳೆ ನಿವಾಸಿ ರಂಜಿತಾ (34) ಮೃತಪಟ್ಟಿದ್ದಾರೆ.
ಡಿವೈಎಫ್ಐ ಬ್ಲಾಕ್ ಘಟಕ ಖಜಾಂಜಿ ಮತ್ತು ವನಿತಾ ಸೇವಾ ಸಹಕಾರಿ ಸಂಘದ ಅಧ್ಯಕ್ಷೆಯಾಗಿದ್ದ ಅವರು ಕುಂಬಳೆ ಪ್ರದೇಶದಿಂದ ಸಿಪಿಐ ಎಂ ನ ಸಮರ್ಥ, ಪ್ರಗಲ್ಭ ನಾಯಕಿಯಾಗಿ ಬೆಳೆದು ಬರುತಿದ್ದರು. ಮೃತದೇಹದ ಬಳಿಯಿಂದ ಚೀಟಿ ದೊರೆತಿದ್ದು ತನ್ನ ವೈಯ್ಯಕ್ತಿಕ ಕಾರಣ ಆತ್ಮಹತ್ಯೆ ಮಾಡಿರುವುದಾಗಿ ತಿಳಿದು ಬಂದಿದೆ .
ಪಕ್ಷದ ಸಂಘಟನಾ ಕಾರ್ಯಕ್ರಮ, ಸಭೆ ನಿಮಿತ್ತ ನಿನ್ನೆ ಸಂಜೆ 5ರ ತನಕವೂ ಕಾರ್ಯಕರ್ತರನ್ನು ಸಂಪರ್ಕಿಸಿ ಲವಲವಿಕೆಯಿಂದ ಮಾತಾಡಿದ್ದ ಅವರು ದಿಢೀರನೆ ಆತ್ಮಹತ್ಯೆ ಮಾಡಿರುವುದು ಪಕ್ಷ ಸಂಘಟನಾ ಕಾರ್ಯಕರ್ತರನ್ನು ನಿಬ್ಬೆರಗಾಗಿಸಿದೆ. ಇವರ ಸಹೋದರ ಸಕ್ರಿಯ ಸಿಪಿಐ ಎಂ ಕಾರ್ಯಕರ್ತ, ರಿಕ್ಷಾ ಚಾಲಕ ಅಜಿತ್ ನಾಲ್ಕೈದು ವರ್ಷದ ಹಿಂದೆ ಕಡಸಲದಲ್ಲಿ ಸಂಬಂಧಿಯೊಬ್ಬರ ಮದುವೆಗೆ ಹೋದವರು ಪಕ್ಕದ ನೇತ್ರಾವತಿ ನದಿಯಲ್ಲಿ ಈಜುತ್ತಿದ್ದಾಗ ಮುಳುಗಿದ ಮಿತ್ರನನ್ನು ರಕ್ಷಿಸುವ ವಿಫಲ ಯತ್ನದಲ್ಲಿ ಮುಳುಗಿ ಮೃತಪಟ್ಟಿದ್ದರು. ರಂಜಿತಾ ಕುಂಬಳೆಯ ಚಂದ್ರಕಾರ್ನವರ ಪುತ್ರಿ ಹಾಗೂ ಸುಜಿತ್ ಬೆಳ್ಚಪ್ಪಾಡರ ಸಹೋದರಿ ಆಗಿರುತ್ತಾಳೆ.



Related posts

ಮೀರಾ ರೋಡ್: ಅಪ್ಪಿ ಸಂಜೀವ ಪಾಲನ್ ನಿಧನ

Mumbai News Desk

ಯಕ್ಷಗಾನದ ಮಧುರ ದ್ವನಿ, ಕರಾವಳಿ ಕೋಗಿಲೆ ಸುಬ್ರಮಣ್ಯ ಧಾರೇಶ್ವರ್ ಇನ್ನಿಲ್ಲ

Mumbai News Desk

ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಉಳಿಸಿಕೊಳ್ಳುವಂತೆ ಎಚ್ಚರವಹಿಸಲು ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಕರೆ

Mumbai News Desk

ಉಡುಪಿ : ಅಕ್ಷತಾ ಪೂಜಾರಿ ಮೇಲೆ ಹಲ್ಲೆ ನಡೆಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ – ಕೋಟ ಶ್ರೀನಿವಾಸ ಪೂಜಾರಿ

Mumbai News Desk

ಪಳ್ಳಿ “ಫಿಶ್ ಮೀಲ್“ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ, ತಹಶೀಲ್ದಾರ್ ರಿಂದ ಸೂಕ್ತ ಕ್ರಮದ ಭರವಸೆ.

Mumbai News Desk

ಮುಂಬೈ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಪ್ರವೀಣ್ ಭೋಜ ಶೆಟ್ಟಿ ಆಯ್ಕೆ

Mumbai News Desk