32 C
Mumbai
April 24, 2026
Mumbai News Kannada
ಸುದ್ದಿ

ಭಿವಂಡಿ:ಹಿರಿಯ ಹೋಟೆಲ್ ಉದ್ಯಮಿ ಸಮಾಜ ಸೇವಕ ದೇವು ಎಸ್ ಪೂಜಾರಿ ನಿಧನ





ಭಿವಂಡಿ, ಜ.8-  ಭಿವಂಡಿ ಪದ್ಮ ನಗರ್ ನಿವಾಸಿ ಹಿರಿಯ ಹೋಟೆಲ್ ಉದ್ಯಮಿ ಸಮಾಜ ಸೇವಕ ದೇವು ಎಸ್. ಪೂಜಾರಿಯವರು(88)  ಜ.8 ರಂದು ನಿಧನ ಹೊಂದಿದರು.ಭಿವಂಡಿ ದಾಮನ್ ನಾಕಾದಲ್ಲಿನ ಸರಾಯಿ ಬಾರ್ ಆ್ಯಂಡ್ ರೆಸ್ಟೋರೆಂಟ್(ಪ್ರಿಯಾ)ಮಾಲಕರಾಗಿದ್ದ ದೇವು ಎಸ್. ಪೂಜಾರಿಯವರು  ಬಿಲ್ಲವರ ಎಸೋಸಿಯೇಷನ್ ಮುಂಬಯಿಯ ಹಿರಿಯ ಸದಸ್ಯ, ಭಿವಂಡಿ ಸ್ಥಳೀಯ ಕಚೇರಿಯ ಸ್ಥಾಪಕ ಕಾರ್ಯಾಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದ್ದರು. ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದ ದೇವು ಪೂಜಾರಿಯವರು ಭಿವಂಡಿ  ಸ್ಥಳೀಯ ಕಚೇರಿ ಜಾಗ ಎಸೋಸಿಯೇಷನ್ ಗೆ ದಾನ ಮಾಡಿದ ಕೊಡುಗೈ ದಾನಿಯಾಗಿರುವರು.ಮೂಲತಃ ಗಂಜಿಮಠದವರಾಗಿದ್ದ ದೇವು ಪೂಜಾರಿಯವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ,ಅಳಿಯ,ಸೊಸೆಯಂದಿರು, ಮೊಮ್ಮಕ್ಕಳ ಸಹಿತ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ದೇವು ಪೂಜಾರಿಯವರ ನಿಧನಕ್ಕೆ

ಬಿಲ್ಲವರ ಅಸೋಸಿಯೇಷನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ ಅಮೀನ್ ಹಾಗೂ ಪದಾಧಿಕಾರಿಗಳು,ಭಿವಂಡಿ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಜಯಂತ್ ಎಸ್ ಸಾಲಿಯಾನ್ ಹಾಗೂ ಪದಾಧಿಕಾರಿಗಳು ಸದಸ್ಯರು, ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜೆ. ಸುವರ್ಣ, ಮಾಜಿನಗರ ಸೇವಕ ಭಿವಂಡಿ ಸಂತೋಷ್ ಎಂ ಶೆಟ್ಟಿ ,ಭಿವಂಡಿ ಹೋಟೆಲ್ ಓನರ್ಸ ಅಸೋಸಿಯೇಷನ್ ಅಧ್ಯಕ್ಷ ದೊಂಡೆರಂಗಡಿ ಭಾಸ್ಕರ್ ಟಿ.ಶೆಟ್ಟಿ ಇವರೆಲ್ಲ ಶೋಕವನ್ನು ವ್ಯಕ್ತಪಡಿಸಿದ್ದಾರೆ.



Related posts

ನ್ಯೂ ಪನ್ವೇಲ್ ನ ನಗರ ಸೇವಕ ಸಂತೋಷ್ ಜಿ ಶೆಟ್ಟಿ ಸಾಯೋಗದಲ್ಲಿ ಶ್ರೀ ಜೈ ಅಂಬೇ ಮಾತಾ ಮಂದಿರ ದ ಮೈದಾನದಲ್ಲಿ  ಶ್ರೀ ರಾಮ ಮಹೋತ್ಸವ ಸಂಭ್ರಮ ಆಚರಣೆ .

Mumbai News Desk

ಭಾಷೆಗಳು ಸ್ನೇಹ ಸೌಹಾರ್ದತೆಯ ಸಂಕೇತ’ -ಆಶಿಶ್ ಶೇಲಾರ್

Mumbai News Desk

ಉಭಯ ಜಿಲ್ಲೆಗಳ ಹೆದ್ದಾರಿ ಸಮಸ್ಯೆಯ ಪರಿಹಾರಕ್ಕೆ ಕೇಂದ್ರ ಸಚಿವರನ್ನು ಭೇಟಿಯಾದ ಉಡುಪಿ/ ಮಂಗಳೂರು ಸಂಸದರು

Mumbai News Desk

ಕಾಂಗ್ರೆಸ್ ಗೆ ಕೈ ಕೊಟ್ಟ ಜಗದೀಶ್ ಶೆಟ್ಟರ್ ಮರಳಿ ಬಿಜೆಪಿಗೆ

Mumbai News Desk

ಶೆರೋನ್ ಶೆಟ್ಟಿ ಐಕಳರವರ ಮಹಾಕುಂಭಾಶ್ವಮೇಧ ಕೃತಿ ಬಿಡುಗಡೆ ಸಮಾರಂಭ

Mumbai News Desk

ಸಂಘರ್ಷ ಪೀಡಿತ ಕೊಲ್ಲಿ ರಾಷ್ಟ್ರಗಳಲ್ಲಿನ ಭಾರತೀಯರ ಸುರಕ್ಷತೆಗೆ ಕ್ರಮ: ಸಚಿವ ಜೈಶಂಕರ್ ಭರವಸೆ

Mumbai News Desk