September 7, 2026
Mumbai News Kannada
ಸುದ್ದಿ

ಭಿವಂಡಿ:ಹಿರಿಯ ಹೋಟೆಲ್ ಉದ್ಯಮಿ ಸಮಾಜ ಸೇವಕ ದೇವು ಎಸ್ ಪೂಜಾರಿ ನಿಧನ





ಭಿವಂಡಿ, ಜ.8-  ಭಿವಂಡಿ ಪದ್ಮ ನಗರ್ ನಿವಾಸಿ ಹಿರಿಯ ಹೋಟೆಲ್ ಉದ್ಯಮಿ ಸಮಾಜ ಸೇವಕ ದೇವು ಎಸ್. ಪೂಜಾರಿಯವರು(88)  ಜ.8 ರಂದು ನಿಧನ ಹೊಂದಿದರು.ಭಿವಂಡಿ ದಾಮನ್ ನಾಕಾದಲ್ಲಿನ ಸರಾಯಿ ಬಾರ್ ಆ್ಯಂಡ್ ರೆಸ್ಟೋರೆಂಟ್(ಪ್ರಿಯಾ)ಮಾಲಕರಾಗಿದ್ದ ದೇವು ಎಸ್. ಪೂಜಾರಿಯವರು  ಬಿಲ್ಲವರ ಎಸೋಸಿಯೇಷನ್ ಮುಂಬಯಿಯ ಹಿರಿಯ ಸದಸ್ಯ, ಭಿವಂಡಿ ಸ್ಥಳೀಯ ಕಚೇರಿಯ ಸ್ಥಾಪಕ ಕಾರ್ಯಾಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದ್ದರು. ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದ ದೇವು ಪೂಜಾರಿಯವರು ಭಿವಂಡಿ  ಸ್ಥಳೀಯ ಕಚೇರಿ ಜಾಗ ಎಸೋಸಿಯೇಷನ್ ಗೆ ದಾನ ಮಾಡಿದ ಕೊಡುಗೈ ದಾನಿಯಾಗಿರುವರು.ಮೂಲತಃ ಗಂಜಿಮಠದವರಾಗಿದ್ದ ದೇವು ಪೂಜಾರಿಯವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ,ಅಳಿಯ,ಸೊಸೆಯಂದಿರು, ಮೊಮ್ಮಕ್ಕಳ ಸಹಿತ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ದೇವು ಪೂಜಾರಿಯವರ ನಿಧನಕ್ಕೆ

ಬಿಲ್ಲವರ ಅಸೋಸಿಯೇಷನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ ಅಮೀನ್ ಹಾಗೂ ಪದಾಧಿಕಾರಿಗಳು,ಭಿವಂಡಿ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಜಯಂತ್ ಎಸ್ ಸಾಲಿಯಾನ್ ಹಾಗೂ ಪದಾಧಿಕಾರಿಗಳು ಸದಸ್ಯರು, ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜೆ. ಸುವರ್ಣ, ಮಾಜಿನಗರ ಸೇವಕ ಭಿವಂಡಿ ಸಂತೋಷ್ ಎಂ ಶೆಟ್ಟಿ ,ಭಿವಂಡಿ ಹೋಟೆಲ್ ಓನರ್ಸ ಅಸೋಸಿಯೇಷನ್ ಅಧ್ಯಕ್ಷ ದೊಂಡೆರಂಗಡಿ ಭಾಸ್ಕರ್ ಟಿ.ಶೆಟ್ಟಿ ಇವರೆಲ್ಲ ಶೋಕವನ್ನು ವ್ಯಕ್ತಪಡಿಸಿದ್ದಾರೆ.



Related posts

ಜೋಗೇಶ್ವರಿ; ಐಲ್ ಬಾಬು ನಿಧನ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು : ಸಡಗರದ ದೀಪಾವಳಿ ಹಬ್ಬದ ಆಚರಣೆ

Mumbai News Desk

ಮುತ್ತೂಟ್ ಫೈನಾನ್ಸ್ ‘ವಿವಾಹ ಸಮ್ಮಾನ 2026’: ಮಂಗಳೂರಿನ 10 ಅರ್ಹ ಹೆಣ್ಣುಮಕ್ಕಳ ಮದುವೆಗೆ ಆರ್ಥಿಕ ಆಸರೆ

Mumbai News Desk

ಮುಂಬೈ : ಗೇಟ್ ವೇ ಆಫ್ ಇಂಡಿಯಾ ಬಳಿ ದೋಣಿ ಮಗುಚಿ ಒಂದು ಸಾವು, 20 ಜನರ ರಕ್ಷಣೆ

Chandrahas

ರಾಮ ಮಂದಿರ ದೇಣಿಗೆ ದುರುಪಯೋಗ ತನಿಖೆಯನ್ನು ಸ್ವಾಗತಿಸಿದ ಪೇಜಾವರ ಶ್ರೀಗಳು

Mumbai News Desk

ಶ್ರೀನಿವಾಸ ಜೋಕಟ್ಟೆ ಅವರಿಗೆ ‘ಎಡನೀರು ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ಸ್ಮರಣಾರ್ಥ ದತ್ತಿನಿಧಿ ಪ್ರಶಸ್ತಿ’ ಪ್ರದಾನ

Mumbai News Desk