
ಮಾರಿಷಸ್ ದೇಶದಲ್ಲಿ ನಡೆಯಲಿರುವ ಮೂರು ದಿನದ ವಿಶ್ವ ಧಾರ್ಮಿಕ ನಾಯಕರ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಉಡುಪಿ ಶ್ರೀ ಪುತ್ತಿಗೆ ಮಠದ ಪೀಠಾಧೀಶರಾದ ಪೂಜ್ಯ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರನ್ನು ಮಾರಿಷಸ್ ದೇಶದ ಅಧ್ಯಕ್ಷರಾದ ಧರಮ್ ಬೀರ್ ಗೋಕುಲ್ ಅವರು ಹೃತ್ಪೂರ್ವಕವಾಗಿ ಸ್ವಾಗತಿಸಿದರು.
ಸುಮಾರು ಎಂಬತ್ತಕ್ಕೂ ಅಧಿಕ ದೇಶಗಳಿಂದ ಆಗಮಿಸಿರುವ ಧಾರ್ಮಿಕ ಮತ್ತು ಸಾಮಾಜಿಕ ಸೇವಾ ಸಂಸ್ಥೆಗಳ ನಾಯಕರ ಸಮ್ಮುಖದಲ್ಲಿ ಜಾಗತಿಕ ಮಟ್ಟದ ಪ್ರಮುಖ ಸಮಕಾಲೀನ ಸವಾಲುಗಳೆನಿಸಿರುವ “ಹವಾಮಾನ ವೈಪರಿತ್ಯ, ಸಂಘರ್ಷ ಮತ್ತು ಋಣಭಾರ” ಎಂಬ ವಿಷಯದ ಕುರಿತು ಪೂಜ್ಯ ಶ್ರೀ ಪುತ್ತಿಗೆ ಶ್ರೀಗಳು ದಿಕ್ಸೂಚಿ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ವಿಶ್ವದ ವಿವಿಧ ದೇಶಗಳ ಗಣ್ಯರು ಹಾಗೂ ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.




