September 6, 2026
Mumbai News Kannada
ಸುದ್ದಿ

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನ ಬ್ರಹ್ಮಕಲಶೋತ್ಸವದಆಮಂತ್ರಣ ಪತ್ರಿಕೆ ಮುಂಬಯಿಯಲ್ಲಿ ಬಿಡುಗಡೆ





ಮುಂಬಯಿ : ತೀಯಾ ಸಮುದಾಯದ ಹದಿನೆಂಟು ಭಗವತೀ ಕ್ಷೇತ್ರಗಳಲ್ಲಿ ಒಂದಾದ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದಲ್ಲಿ ಮಾ. 4 ರಿಂದ 8 ರ ತನಕ ಅದ್ದೂರಿಯಾಗಿ ಬ್ರಹ್ಮಕಲಶೋತ್ಸವದ ನಡೆಯಲಿದ್ದು ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯ ಮುಂಬಯಿಯಲ್ಲಿ ಬಿಡುಗಡೆ ಸಮಾರಂಭವು ಇತ್ತೀಚೆಗೆ ದೇವಸ್ಥಾನದ ಆಡಳಿತ ಮೊಕ್ತೇಸರ, ಬ್ರಹ್ಮಕಲಶೋತ್ಸವ ಮುಂಬಯಿಯ ಸಮಿತಿಯ ಕಾರ್ಯಾಧ್ಯಕ್ಷರೂ ಆದ ಚಂದ್ರಶೇಖರ ಬೆಳ್ಳಡ ಗಂಪ ಮನೆ ಕಟೀಲು, ಬ್ರಹ್ಮಕಲಶೋತ್ಸವ ಮುಂಬಯಿ ಸಮಿತಿಯ ಅಧ್ಯಕ್ಷರಾದ ಉಧ್ಯಮಿ ಸಮಾಜ ಸೇವಕ ವೇದಪ್ರಕಾಶ್ ಎಂ. ಶ್ರೀಯಾನ್, ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನ ಮುಂಬಯಿ ಸಮಿತಿಯ ಅಧ್ಯಕ್ಷರಾದ ಚಂದ್ರಹಾಸ ಪಾಲನ್ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಇತರ ಪದಾಧಿಕಾರಿಗಳು ಮತ್ತು ಸದಸ್ಯರುಗಳ ಉಪಸ್ಥಿತಿಯಲ್ಲಿ ವೇದಪ್ರಕಾಶ್ ಎಂ. ಶ್ರೀಯಾನ್ ಇವರ ಕಾರ್ಯಾಲಯದಲ್ಲಿ ಬಿಡುಗಡೆ ಮಾಡಲಾಯಿತು.
ಆಮಂತ್ರಣ ಪತ್ರಿಕೆನ್ನು ಬಿಡುಗಡೆ ಮಾಡಿ ಮಾತನಾಡಿದ ಚಂದ್ರಶೇಖರ ಬೆಳ್ಳಡ ಅವರು ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ ನಡೆಯುತ್ತಿರುವ ಪೂರ್ವ ತಯಾರಿಯ ಬಗ್ಗೆ ಹಾಗೂ ಬ್ರಹ್ಮಕಲಶೋತ್ಸವ ಸಮಾರಂಭದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ಬ್ರಹ್ಮಕಲಶೋತ್ಸವ ಮುಂಬಯಿ ಸಮಿತಿಯ ಗೌರವ ಅಧ್ಯಕ್ಷರುಗಳಾಗಿ ಮುಂಬಯಿಯ ಉದ್ಯಮಿಗಳಾದ ಡಾ. ಸದಾಶಿವ ಕೆ. ಶೆಟ್ಟಿ ಕನ್ಯಾನ, ಕೃಷ್ಣ ಎನ್ ಉಚ್ಚಿಲ್ ಗೌರವ ಸಲಹಾಗಾರರಾಗಿ ಸುನಿಲ್ ಪಾಯಸ್ ಚೆಂಬೂರು, ರೋಹಿದಾಸ ಬಂಗೇರ, ಧರ್ಮಪಾಲ ದೇವಾಡಿಗ, ಎಲ್. ವಿ. ಅಮೀನ್, ಜಯ ಸಿ. ಸಾಲ್ಯಾನ್, ಸುರೇಶ್ ಕಾಂಚನ್, ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ಕೆ. ಡಿ. ಶೆಟ್ಟಿ ವಿರಾರ್ ಶಂಕರ್ ಶೆಟ್ಟಿ, ಧನಂಜಯ ಶೆಟ್ಟಿ, ಕುಮಾರ ಬಂಗೇರ, ಕಳತ್ತೂರು ವಿಶ್ವನಾಥ್ ಶೆಟ್ಟಿ, ಸೂರ್ಯಕಾಂತ್ ಜೆ ಸುವರ್ಣ, ಕುಮಾರ ಸ್ವಾಮಿ, ಐಕಳ ಹರೀಶ್ ಶೆಟ್ಟಿ, ಹರೀಶ್ ಅಮೀನ್, ಲಕ್ಷ್ಮಣ ಪೂಜಾರಿ, ಪ್ರವೀಣ್ ಭೋಜ ಶೆಟ್ಟಿ, ಸಿಬಿ ಕರ್ಕೆರ, ಗಣೇಶ್ ಕಾಂಚನ್, ದಿನೇಶ್ ಕಿರೋಡಿಯನ್, ಅಜಿತ್ ಸುವರ್ಣ, ಭಾಸ್ಕರ್ ಎಂ. ಸಾಲ್ಯಾನ್ ಉಪಾಧ್ಯಕ್ಷರುಗಳಾಗಿ ದೇವರಾಜ್ ಹಳೆಯಂಗಡಿ, ಅಶೋಕ್ ಪುತ್ರನ್, ಹರೀಶ್ ಶ್ರೀಯಾನ್, ಚಂದ್ರಹಾಸ ಪಾಲನ್, ದೇವರಾಜ್ ಎಚ್ ಕುಂದರ್, ಜಯಂತ್ ಶ್ರೀಯಾನ್, ರವಿ ಎಲ್ ಕರ್ಕೇರ, ಏಕನಾಥ ಅಮೀನ್ , ಉಮೇಶ್ ಸಾಲಿಯಾನ್, ಚಂದ್ರಕಾಂತ ಪುತ್ರನ್, ವಿಜಯ ಪಿ ಸನಿಲ್ , ಲಕ್ಷ್ಮಣ್ ಪಿ ಸನಿಲ್ , ಪುರುಷೋತ್ತಮ ಕೋಟಂಕರ್, ಭಾಸ್ಕರ್ ಎಲ್ ಕಾಂಚನ್, ಪದ್ಮನಾಭ ಅಮೀನ್, ಸತೀಶ್ ಕೋಟ್ಯಾನ್, ಧೀರಜ್ ಎಸ್ ಶ್ರೀಯಾನ್, ಪ್ರಶಾಂತ್ ಅಮೀನ್ ಕೋಟೆ, ಆನಂದ ಬಂಗೇರ ಥಾಣೆ, ಮೋಹನ್ ಆರ್ ಕೋಟ್ಯಾನ್, ದೇವದಾಸ ಪುತ್ರನ್,
ಕಾರ್ಯದರ್ಶಿಗಳಾಗಿ ಶ್ರೀಮತಿ ಪ್ರಭಾವತಿ ಅಮೀನ್, ಸುಧಾಕರ ಬೆಳ್ಚಡ, ವಿಶ್ವನಾಥ ಬಂಗೇರ ಸಂಘಟನಾ ಕಾರ್ಯದರ್ಶಿಗಳಾಗಿ ಅಶೋಕ್ ಸಸಿಹಿತ್ಲು, ಸುರೇಂದ್ರ ಬಂಗೇರ, ಪದ್ಮನಾಭ ಸಸಿಹಿತ್ಲು, ಶ್ರೀಧರ ಸುವರ್ಣ, ಖಜಾಂಚಿಗಳಾಗಿ ಶ್ರೀಮತಿ ಕಲಾವತಿ ಕೋಟ್ಯಾನ್, ರಮೇಶ್ ಬಿ. ಸಾಲ್ಯಾನ್ ಮತ್ತು ಸುನಿಲ್ ಎನ್ ಪುತ್ರನ್ ಸೇವೆ ಸಲ್ಲಿಸುತಿರುವರು.



Related posts

ಧಾರ್ಮಿಕ ಕ್ಷೇತ್ರಗಳ ಬಗ್ಗೆ ಸ್ಥಾಪಿತ ಹಿತಾ ಶಕ್ತಿಗಳ ಅಪಪ್ರಚಾರ ಮೂಲಕ ಭಕ್ತಾಭಿಮಾನಿಗಳ ದಿಕ್ಕು ತಪ್ಪಿಸುವುದು ಸನಾತನ ಧರ್ಮಕ್ಕೆ ಮಾರಕ – ತೋನ್ಸೆ ಜಯಕೃಷ್ಣ ಎ. ಶೆಟ್ಟಿ.

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮತ್ತು ಇತರ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಪಚ್ಚನಾಡಿ ಹಿಂದೂ ರುದ್ರ ಭೂಮಿಯಲ್ಲಿ ಸ್ವಚ್ಛತಾ ಅಭಿಯಾನ.

Mumbai News Desk

ಕೊಂಡೆವೂರು ಶ್ರೀಗಳ 21 ನೇ ಚಾತುರ್ಮಾಸ್ಯ ವ್ರತಾಚರಣೆಉಪ್ಪಳ ಜು:    ಕೊಂಡೆವೂರು

Mumbai News Desk

ಕಾಪು ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಗಳ ಸ್ಥಾಪಕ, ಕೆ.ಪಿ. ಆಚಾರ್ಯ ನಿಧನ

Mumbai News Desk

ಭಾರತ್ ಬ್ಯಾಂಕಿಗೆ ಪ್ರತಿಷ್ಠಿತ ಐಬಿಎ (IBA) ಪ್ರಶಸ್ತಿಗಳ ಗರಿ: ಡಿಜಿಟಲ್ ಸೇಲ್ಸ್ ಮತ್ತು ಐಟಿ ರಿಸ್ಕ್ ಮ್ಯಾನೇಜ್‌ಮೆಂಟ್‌ನಲ್ಲಿ ಅತ್ಯುತ್ತಮ ಸಾಧನೆ

Mumbai News Desk

*ನಿವೃತ್ತ ಪೊಲೀಸ್ ಉಪ ಅಧೀಕ್ಷಕ ಹರಿಶ್ಚಂದ್ರ ಹೆಜಮಾಡಿ ಇನ್ನಿಲ್ಲ

Mumbai News Desk