ಮುಂಬಯಿ: ಇಲ್ಲಿನ ಕಾಂದಿವಲಿ ಪಶ್ಚಿಮದ ಎಂ.ಜಿ. ರಸ್ತೆಯ ಸ್ವಾಮಿ ದರ್ಶನ್ ಸೊಸೈಟಿಯ ನಿವಾಸಿ, ಯೂನಿಯನ್ ಬ್ಯಾಂಕಿನ ನಿವೃತ್ತ ಅಧಿಕಾರಿ ಕುಸುಮಲತಾ ಕೃಷ್ಣ ಸುವರ್ಣ (71) ಅವರು ಮಾರ್ಚ್ 12ರಂದು ನಿಧನರಾದರು.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ನವರಾದ ಇವರು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಮೃತರು ಪುತ್ರಿ, ಭಾರತ್ ಬ್ಯಾಂಕಿನ ಕೇಂದ್ರ ಕಚೇರಿಯ ಸಿಬ್ಬಂದಿ ವೀಣಾ ಸುವರ್ಣ, ಸಹೋದರಿಯರಾದ ಶಾಲಿನಿ ಅಶೋಕ್ ಮೂಡಬಿದ್ರಿ, ಮೀರಾ ಸೋಮನಾಥ ಅಮೀನ್, ಸಹೋದರ ಲೋಕೇಶ್ ವಿ. ಕರ್ಕೇರ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಕುಸುಮಲತಾ ಸುವರ್ಣ ಅವರ ನಿಧನಕ್ಕೆ ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ಉಪ ಕಾರ್ಯಾಧ್ಯಕ್ಷ ನ್ಯಾಯವಾದಿ ಸೋಮನಾಥ ಅಮೀನ್, ನಿರ್ದೇಶಕರುಗಳಾದ ಗಂಗಾಧರ್ ಜೆ. ಪೂಜಾರಿ, ಭಾಸ್ಕರ್ ಸಾಲಿಯನ್ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ತೀವ್ರ ಸಂತಾಪ ಸೂಚಿಸಿದ್ದಾರೆ.




