35 C
Mumbai
May 10, 2026
Mumbai News Kannada
ಪ್ರಕಟಣೆ

ಮಾ. 23: ಕಾಂದಿವಲಿ ಕನ್ನಡ ಸಂಘದ ಮಹಿಳಾ ವಿಭಾಗದ ವತಿಯಿಂದ ಅರಶಿನ ಕುಂಕುಮ ಕಾರ್ಯಕ್ರಮ





ಮುಂಬಯಿ: ಕಾಂದಿವಲಿ ಕನ್ನಡ ಸಂಘದ ಮಹಿಳಾ ವಿಭಾಗದ ವತಿಯಿಂದ ಅರಶಿನ ಕುಂಕುಮ ಕಾರ್ಯಕ್ರಮವು ಮಾ. 22 ರವಿವಾರದಂದು ಮಧ್ಯಾಹ್ನ 3 ಗಂಟೆಯಿಂದ ಪೊಯಿಸರ್ ಜಿಮ್ಖಾನ, ಮಹಾವೀರ ನಗರ, ಕಾಂದಿವಲಿ ಪಶ್ಚಿಮ ಇಲ್ಲಿ ಆಯೋಜಿಸಲಾಗಿದೆ.

​ಸಂಘದ ಅಧ್ಯಕ್ಷರಾದ ಪೊಲ್ಯ ಜಯಪಾಲ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನೋದಾ ಡಿ. ಶೆಟ್ಟಿ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

​ಮುಖ್ಯ ಅತಿಥಿಯಾಗಿ ಗೊರೆಗಾಂವ್ ಕರ್ನಾಟಕ ಸಂಘದ ಉಪಾಧ್ಯಕ್ಷೆ ಸರಿತಾ ಎಸ್. ನಾಯಕ್ ಪಾಲ್ಗೊಳ್ಳಲಿದ್ದಾರೆ. ಮಹಿಳಾ ವಿಭಾಗದ ಸದಸ್ಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಂಗೀತ ಕಲಾವಿದ ವಿಜಯ ಶೆಟ್ಟಿ ಮೂಡುಬೆಳ್ಳೆ ಮತ್ತು ತಂಡದವರಿಂದ ‘ರಸಮಂಜರಿ’ ಕಾರ್ಯಕ್ರಮ ನಡೆಯಲಿದೆ.

​ಕಾರ್ಯಕ್ರಮದಲ್ಲಿ ಮಹಿಳೆಯರು ಮತ್ತು ಪರಿಸರದ ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಂಘದ ಗೌರವಾಧ್ಯಕ್ಷ ಪಳ್ಳಿ ಕಾವೇರಿಬೆಟ್ಟು ಜಯಕರ್ ಶೆಟ್ಟಿ, ಉಪಾಧ್ಯಕ್ಷರಾದ ಪ್ರೇಮನಾಥ್ ಪಿ. ಕೋಟ್ಯಾನ್, ವಾರಿಜಾ ಕರ್ಕೆರ, ಗೌರವ ಪ್ರಧಾನ ಕಾರ್ಯದರ್ಶಿ ಸಬಿತಾ ಜಿ. ಪೂಜಾರಿ, ಗೌರವ ಕೋಶಾಧಿಕಾರಿ ಜಗನ್ನಾಥ ಡಿ. ಕುಕ್ಯಾನ್, ಜೊತೆ ಕಾರ್ಯದರ್ಶಿ ಚೇತನ ಶೆಟ್ಟಿ, ಜೊತೆ ಕೋಶಾಧಿಕಾರಿ ಜಯಂತಿ ಸಾಲ್ಯಾನ್, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಶರ್ಮಿಳಾ ಶೆಟ್ಟಿ, ಕಾರ್ಯದರ್ಶಿ ಜಯಲಕ್ಷ್ಮಿ ಶೆಟ್ಟಿ, ಕೋಶಾಧಿಕಾರಿ ಆಶಾ ಮೊಗವೀರ ಹಾಗೂ ಮಹಿಳಾ ವಿಭಾಗದ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ.



Related posts

ಡಿ.10 ರಂದು ಕರ್ನಾಟಕ ಸಂಘ, ಡೊಂಬಿವಲಿಯ ನಾಡಹಬ್ಬ ಸಮಾರಂಭ

Mumbai News Desk

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಲ್ಲಿಕಾರು ಮೂಡಬಿದಿರೆ : ಮೇ.3-4 ಶತಮಾನೋತ್ಸವ ಸಂಭ್ರಮ

Mumbai News Desk

ಗೇರು ಬೀಜದ ಉತ್ಪನ್ನಗಳು, ಡ್ರೈ ಫ್ರುಟ್ಸ್ ಖಾದ್ಯಗಳು ಇದೀಗ ಮೂಲ್ಕಿಯಲ್ಲಿ ಲಭ್ಯ.

Mumbai News Desk

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ; ಆ. 10 ರಂದು ಕಾಂದಿವಲಿಯಲ್ಲಿ “ಆಟಿದ ನೆನೆಪು – ಸ್ಕಿಲ್ಲ್ ಫಾರ್ ಎಂಪ್ಲಾಯ್” ಜಂಟಿ ಕಾರ್ಯಕ್ರಮ.

Mumbai News Desk

ಕುಲಾಲ ಪ್ರತಿಷ್ಠಾನದ ಆಶ್ರಯದಲ್ಲಿ ನ.23 ರಂದು ವಿಜಯ ಕಲಾವಿದರು ಕಿನ್ನಿಗೋಳಿ ಇದರ ಮುಂಬೈ ಪ್ರವಾಸದ ಉದ್ಘಾಟನೆ

Mumbai News Desk

ಡಿ. 14 ರಂದು ಭಾಯಂದರ್ ಅಯ್ಯಪ್ಪ ಭಕ್ತ ಮಂಡಲದ ಇಪ್ಪತ್ತನೇ ವರ್ಷದ ಮಹಾಪೂಜೆ

Mumbai News Desk