July 21, 2026
Mumbai News Kannada
ತುಳುನಾಡು

ಮೂಲತ್ವ ಫೌಂಡೇಶನ್‌ನಿಂದ ‘ಆಟಿದೊಂಜಿ ದಿನ’ ಆಚರಣೆ: ಶಾಸಕ ವೇದವ್ಯಾಸ ಕಾಮತ್ ಉದ್ಘಾಟನೆ, ‘ಮೂಲತ್ವ ಲೋಕ ಪೊರ್ಲು’ ಅನಾವರಣ







ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ನಡೆದ 10ನೇ ವರ್ಷದ
ಆಟ್ಟಿಡೊಂಜಿ ದಿನ ಕಾರ್ಯಕ್ರಮವು ಪದವು ಶಾಲೆಯ ಬಳಿಯಲ್ಲಿರುವ ಸಿ ಓ ಡಿ ಪಿ ಸಭಾಂಗಣದಲ್ಲಿ ನೆರವೇರಿತು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ದಕ್ಷಿಣ ಕ್ಷೇತ್ರದ ಜನಪ್ರಿಯ ಶಾಸಕರಾದ ವೇದವ್ಯಾಸ ಕಾಮತ್ ಇವರು ಉದ್ಘಾಟಿಸಿ ಮಾತಾಡಿ ಮೂಲತ್ವ ಫೌಂಡೇಶನ್ ಮಾಡುವ ಎಲ್ಲಾ ಕಾರ್ಯಗಳನ್ನು ಕೆಲಸಗಳನ್ನು ಕೊಂಡಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರ ಕಂಕನಾಡಿ ಇದರ ಅಧ್ಯಕ್ಷರಾದ ಶ್ರೀಯುತ ಚಿತ್ತರಂಜನ್, ಮೂಡದ ಮಾಜಿ ಅಧ್ಯಕ್ಷರಾದ ರವಿಶಂಕರ್ ಮಿಜಾರ್, ಪ್ರೊಫೆಸರ್ ರಾಜ್ ಮೋಹನ್ ರಾವ್, ಡಾಕ್ಟರ್ ಶ್ರೀಮತಿ ಕುಸುಮ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಡಾಕ್ಟರ್ ಸತೀಶ್ ರಾವ್, ಟ್ರಸ್ಟಿನ ಅಧ್ಯಕ್ಷರಾದ ಪ್ರಕಾಶ್ ಮೂಲತ್ವ, ಟ್ರಸ್ಟಿಗಳಾದ ಲಕ್ಷ್ಮೀಶ, ಕಲ್ಪನಾ, ಶೈನಿ ಅಕ್ಷತ ಕದ್ರಿ ಉಪಸ್ಥಿದ್ದರು ಈ ಸಮಯದಲ್ಲಿ ಮೂಲತ್ವ ಲೋಕ ಪೊರ್ಲು ಎಂಬ ನೆಂಪು ಕಾಣಿಗೆ ಯನ್ನು ಎಲ್ಲಾ ಗಣ್ಯರು ಸೇರಿ ಉದ್ಘಾಟಿಸಿದರು. ಮೂಲತ್ವ ಲೋಕ ಪೊರ್ಲು ಎಂಬ ಹೊಸ ಚಿಂತನದ ಬಗ್ಗೆ ಟ್ರಸ್ಟಿನ ಅಧ್ಯಕ್ಷ ಪ್ರಕಾಶ್ ಮೂಲತ್ವ ವಿವರಿಸಿದರು ಇನ್ನು ಮುಂದೆ ಆಟಿ ದೊಂಜಿ ದಿನದಂದು ನಮ್ಮ ತುಳುನಾಡಲ್ಲಿ ಎಲ್ಲಾ ಕ್ಷೇತ್ರದಲ್ಲಿ ಸಾಧನೆಗೈದ ಎಲ್ಲಾ ವರ್ಗದವರಿಗೆ ಈ ಮೂಲತ್ವ ಲೋಕ ಪೊರ್ಲು ಎಂಬ ನೆಂಪು ಕಾಣಿಗೆ ಕೊಟ್ಟು ಗೌರವಿಸಲಾಗುವುದೆಂದು ಟ್ರಸ್ಟ್ ಅಧ್ಯಕ್ಷರು ತಿಳಿಸಿದರು ಈ ವರ್ಷದ ಈ ಗೌರವವನ್ನು ಬಂದ ಎಲ್ಲಾ ಅತಿಥಿಗಳಿಗೆ ಅದರೊಂದಿಗೆ ರಂಗಭೂಮಿ ನಟ ಚಲನಚಿತ್ರ ನಟ ಧಾರ್ಮಿಕ ಮುಂದಾಳು ಧರ್ಮದರ್ಶಿ ಶ್ರೀ ಸತೀಶ್ ಬಂದಲಗೆ ಕೊಟ್ಟು ಗೌರಿಸಲಾಯಿತು.
36 ಬಗೆಯ ಹಲವಾರು ಊಟ ಉಪಚಾರಗಳು ಬಡಿಸಲಾಯಿತು. ಎಲ್ಲರನ್ನು ಟ್ರಸ್ಟಿನ ಅಧ್ಯಕ್ಷರು ಸ್ವಾಗತಿಸಿದರು , ಮಿತಿಲ್ ಇವರು ವಂದನಾರ್ಪಣೆ ಮಾಡಿದರು. ಮಮತಾ ರಾಮ್ ಪ್ರಸಾದ್ ನಿರೂಪಣೆ ಮಾಡಿದರು.



Related posts

ಭಯ-ಭಕ್ತಿಯ ರೋಮಾಂಚನ: ಕಣ್ಮನ ಸೆಳೆದ ಕಾಪುವಿನ ಇತಿಹಾಸ ಪ್ರಸಿದ್ಧ ಪಿಲಿಕೋಲ

Mumbai News Desk

ಕೂತಲ್ಲೇ ಸಿಕ್ತು ಬೂತಾಯಿ ಮೀನಿನ ‘ಲಾಟರಿ’: ಉಳ್ಳಾಲ ತೀರದಲ್ಲಿ ಪ್ರಕೃತಿಯ ‘ಬಂಪರ್ ಆಫರ್

Mumbai News Desk

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

Mumbai News Desk

ಓಂ ಶ್ರೀ ಜಗದೀಶ್ವರಿ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಸೇವಾ ಸಮಿತಿ (ರಿ.)ಯ ವತಿಯಿಂದ ಆಟಿದ ಪೊರ್ಲು ಕಾರ್ಯಕ್ರಮ

Mumbai News Desk

ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನಕ್ಕೆ ಖ್ಯಾತ ಹಿನ್ನೆಲೆ ಗಾಯಕ ಕುನಲ್ ಗಾಂಜಾವಾಲ ಭೇಟಿ

Mumbai News Desk

ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ದಾರದ ನಿಮ್ಮಿತ ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮ

Mumbai News Desk