
ಮಂಗಳೂರು: ನಗರದ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ “ನಾನೇ ನೀನು, ನೀನೇ ನಾನು” ಎಂಬ ತತ್ತ್ವದೊಂದಿಗೆ ಜುಲೈ 29, 2026ರ ಬುಧವಾರದಂದು ಗುರುಪೂರ್ಣಿಮೆ ಮಹೋತ್ಸವವನ್ನು ಮಂಗಳೂರಿನ ಸುವರ್ಣ ರೆಸಿಡೆನ್ಸಿ, ಮಾರಿಕಾಂಬ ದೇವಸ್ಥಾನದ ರಸ್ತೆ, ತಾರೇತೋಟ ಇಲ್ಲಿ ಅತ್ಯಂತ ಶ್ರದ್ಧಾ-ಭಕ್ತಿಗಳೊಂದಿಗೆ ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ 7.30ರಿಂದ ರಾತ್ರಿ 8.30ರವರೆಗೆ ನಿರಂತರವಾಗಿ ಪೂಜಾ ಕೈಂಕರ್ಯಗಳು ನೆರವೇರಲಿವೆ. ಕಾರ್ಯಕ್ರಮದ ಭಕ್ತಿ ಸಂಗೀತದ ಭಾಗವಾಗಿ ಬೆಳಿಗ್ಗೆ 11.00ರಿಂದ 12.30ರವರೆಗೆ ‘ಶಿವಶಕ್ತಿ ಭಜಕ ವೃಂದ ಕಾವೂರು’ ಹಾಗೂ ಸಂಜೆ 6.00ರಿಂದ 7.30ರವರೆಗೆ ‘ಶ್ರೀ ರಾಮ ಭಜನಾ ಮಂದಿರ ಮರೋಳಿ’ ತಂಡಗಳಿಂದ ಭಜನಾ ಸಂಕೀರ್ತನೆ ಕಾರ್ಯಕ್ರಮ ಜರುಗಲಿದೆ. ಭಕ್ತಾದಿಗಳಿಗೆ ಮಧ್ಯಾಹ್ನ 1.00 ಗಂಟೆಗೆ ಹಾಗೂ ರಾತ್ರಿ 8.00 ಗಂಟೆಗೆ ಮಹಾ ಅನ್ನಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿದೆ.
ಈ ಸದ್ಭಾವನಾ ಧಾರ್ಮಿಕ ಕಾರ್ಯಕ್ರಮಕ್ಕೆ ಶ್ರೀ ಪ್ರಕಾಶ್ ಮೂಲತ್ವ ಹಾಗೂ ಸಂಸ್ಥೆಯ ಸರ್ವ ಸದಸ್ಯರು ಸರ್ವ ಭಕ್ತಾದಿಗಳನ್ನು ಆದರದಿಂದ ಸ್ವಾಗತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9611496044 ಅಥವಾ 9036478093 ಹಾಗೂ ವೆಬ್ಸೈಟ್ www.moolathva.org ಅನ್ನು ಸಂಪರ್ಕಿಸಬಹುದು.





