
ಬೋರಿವಲಿ ಪೂರ್ವದ ಸಂಜಯ ಗಾಂಧಿ ರಾಷ್ಟ್ರೀಯ ಉದ್ಯಾನದ ಸನಿಹದ ಶ್ರೀಕೃಷ್ಣ ನಗರದ ನ್ಯಾನ್ಸಿ ಕಾಂಫ್ಲೆಕ್ಸ್ (ನವನಿರ್ಮಿತವಾಗಿರುವ ಶೀತಲ್ ರಿಗಾಲಿಯಾ) ಇಲ್ಲಿಯ ಶ್ರೀ ಜಗದೀಶ್ವರಿ ಮಂದಿರದಲ್ಲಿ ಇದೇ ಸೋವವಾರ ದಿನಾಂಕ ಆ.17, ನಾಗಪಂಚಮಿಯಂದು ಬೆಳಿಗ್ಗೆ 6-00 ರಿಂದ 7-00ರ ತನಕ ಪಂಚಾಮೃತ ಮಹಾ ಅಭಿಷೇಕ, 7-00 ರಿಂದ 9-00ರ ತನಕ ಆಶ್ಲೇಷ ಬಲಿ ಮಹಾಪೂಜೆ ನಡೆಯಲಿದೆ.
ಕ್ಷೇತ್ರದ ಆಡಳಿತ ಮಂಡಳಿ ಇದರ ಸಂಕಲ್ಪದಂತೆ, ಮಂದಿರದಲ್ಲಿ ಹತ್ತು-ಹಲವು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ಜರಗುತ್ತಲಿರುವುದು. ಅಂತೆಯೇ ಮಂದಿರದ ಪ್ರಧಾನ ಅರ್ಚಕರಾದ ವಿದ್ವಾನ್ ವಿಜಯ ಉಪಾಧ್ಯಾಯ ಇವರ ನೇತೃತ್ವದಲ್ಲಿ, ನಾಗಪಂಚಮಿಯಂದು ಶ್ರೀ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿರುವುದು.
ಭಕ್ತಾದಿಗಳೆಲ್ಲರು ಸಕಾಲದಲ್ಲಿ ಆಗಮಿಸಿ, ಕಾರ್ಯಕ್ರಮಗಳಲ್ಲಿ ಸಹಭಾಗಿಗಳಾಗಿದ್ದು, ಶ್ರೀ ಜಗದೀಶ್ವರಿ ಮಾತೆಯ ಹಾಗೂ ನಾಗದೇವರ ತೀರ್ಥಪ್ರಸಾದ ಸ್ವೀಕರಿಸಿ, ಪುನೀತರಾಗಬೇಕಾಗಿ ಆಡಳಿತ ಮಂಡಳಿ, ವಿಪ್ರವೃಂದ ಹಾಗೂ ಸರ್ವ ಸದಸ್ಯರು ವಿನಂತಿಸುತ್ತಿದ್ದಾರೆ.




