30 C
Mumbai
August 16, 2026
Mumbai News Kannada
ಪ್ರಕಟಣೆ

ಫಲಿಮಾರಿನಲ್ಲಿ ಆ.17ರಂದು ಕುಮಾರವ್ಯಾಸ ವಿರಚಿತ ‘ಮಹಾಭಾರತ’ ಸಪ್ತಾಹ ವಾಚನ ಮಂಗಲೋತ್ಸವ





ಶ್ರೀ ಸೀತಾರಾಮ ಭಜನಾ ಮಂದಿರ (ರಿ.)ಫಲಿಮಾರು ಹೊಸಗ್ಮೆ ಯಲ್ಲಿ ಕಳೆದ 67 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ಕುಮಾರವ್ಯಾಸ ವಿರಚಿತ “ಮಹಾಭಾರತ” ಎಂಬ ಸಪ್ತಾಹ ವಾಚನದ ಮಂಗಲೋತ್ಸವವು ಆಗಸ್ಟ್ 17, 2026ರ ಸೋಮವಾರ ಸಾಯಂಕಾಲ 8 ಗಂಟೆಗೆ ನಡೆಯಲಿದೆ. ಈ ವರ್ಷದ ಸಪ್ತಾಹ ವಾಚನವು ಜುಲೈ 16, 2026ರಿಂದ ಶ್ರೀ ಜಯ ದೇವಾಡಿಗ, ಸುರತ್ಕಲ್ ಇವರಿಂದ ವಾಚನ ಹಾಗೂ ಪ್ರವಚನಕಾರರಾದ ಶ್ರೀ ಭಾಸ್ಕರ ಕೆ. ಪಡುಬಿದ್ರಿ ಮತ್ತು ಶ್ರೀ ಮನೋಹರ ಕುಂದರ್ ಅವರಿಂದ ಪ್ರಾರಂಭವಾಗಿದ್ದು, ಆಗಸ್ಟ್ 17ರಂದು ಮಂಗಲೋತ್ಸವದೊಂದಿಗೆ ಸಮಾಪನಗೊಳ್ಳಲಿದೆ.
ಶ್ರೀ ಸೀತಾರಾಮ ಭಜನಾ ಮಂದಿರ (ರಿ.)ದ ವತಿಯಿಂದ ಆಯೋಜಿಸಲಾಗಿರುವ ಈ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ಸೀತಾರಾಮ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗುವಂತೆ ವಿನಂತಿಸಲಾಗಿದೆ. ಸಪ್ತಾಹ ವಾಚನದ ಮಂಗಲೋತ್ಸವವು ಸೋಮವಾರ ಸಾಯಂಕಾಲ 8 ಗಂಟೆಗೆ ನೆರವೇರಲಿದ್ದು, ಭಕ್ತರ ಸಾನ್ನಿಧ್ಯದಲ್ಲಿ ಕಾರ್ಯಕ್ರಮವು ಶ್ರದ್ಧಾಭಕ್ತಿಯಿಂದ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಫಲಿಮಾರು ಮೊಗವೀರ ಸಭಾ (ರಿ.), ಫಲಿಮಾರು, ಫಲಿಮಾರು ಮೊಗವೀರ ಸಭಾ, ಮುಂಬಯಿ, ಫಲಿಮಾರು ಮೊಗವೀರ ಮಹಿಳಾ ಮಂಡಳಿ, ಫಲಿಮಾರು ಹಾಗೂ ಶ್ರೀ ಸೀತಾರಾಮ ಸೇವಾ ಸಮಿತಿ, ಫಲಿಮಾರು ಇವರು ತಮ್ಮ ಆಗಮನಾಭಿಲಾಷಿಗಳಾಗಿದ್ದಾರೆ.

ವಿಶೇಷ ಕಾರ್ಯಕ್ರಮ : ಫಲಿಮಾರು ಮೊಗವೀರ ಮಹಿಳಾ ಮಂಡಳಿಯ ವತಿಯಿಂದ “ಶ್ರೀ ಹರಿ ಅಲಂಕಾರ” ಎಂಬ ಯಕ್ಷಗಾನ ಆಗಸ್ಟ್ 18, 2026ರಂದು ಮಂಗಳವಾರ ಸಾಯಂಕಾಲ 4.30 ಗಂಟೆಗೆ ನಡೆಯಲಿದೆ. ಕಾರ್ಯಕ್ರಮಕ್ಕೆ ಭಕ್ತಾಭಿಮಾನಿಗಳು ನೀಡುವ ಉದಾರ ಧನ ಸಹಾಯವನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಲಾಗುವುದು ಎಂದು ತಿಳಿಸಲಾಗಿದೆ.



Related posts

ಮಾಲಾಡ್ ಶ್ರೀ ವರ ಮಹಾಲಕ್ಷ್ಮಿ ಪೂಜಾ ಸಮಿತಿಯ ಮಹಿಳಾ ವಿಭಾಗ, ಪೆ 18ರಂದು   ಅರಶಿನ ಕುಂಕುಮ

Mumbai News Desk

ಮೇ10: ವೀರನಾರಾಯಣ ದೇವಸ್ಥಾನ ಮೇಲ್ಟಾವಣಿ ಉದ್ಘಾಟನೆ. ಯಕ್ಷಗಾನ.

Mumbai News Desk

     ಜೂ  ೧೬ :  ಶನಿ ಮಹಾತ್ಮ ಚಾರಿಟೇಬಲ್ ಸೊಸೈಟಿ ವತಿಯಿಂದ ವಿದ್ಯಾರ್ಥಿಗಳಿಗೆ   ಪುಸ್ತಕ,   ಸಾಮಗ್ರಿಗಳ  ವಿತರಣೆ

Mumbai News Desk

ಪುನೀತ್ ನ ಚಿಕಿತ್ಸೆ ನೆರವಿಗಾಗಿ ಮನವಿ

Mumbai News Desk

ಗೀತಾ ಮಂದಿರ ಸೇವಾ ಸಮಿತಿ ಹೆಜಮಾಡಿ : ನಾಳೆ (ಅ. 17) 7ನೇ ವರ್ಷದ ಕಥಾ ಮಂಗಳೋತ್ಸವ

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಸಾವರ್ಕರ್ ನಗರ್ -ಥಾಣೆ: ಅಕ್ಟೋಬರ್ 17ರಂದು ಮಾಸಿಕ ಸಂಕ್ರಮಣ ಪೂಜೆ

Mumbai News Desk