September 1, 2026
Mumbai News Kannada
ತುಳುನಾಡು

ಬಪ್ಪನಾಡು: ಹೊಸ ಅಂಗಣ ದಶಮಾನೋತ್ಸವ ಸಂಭ್ರಮ-ಆಮಂತ್ರಣ ಪತ್ರಿಕೆ ಬಿಡುಗಡೆ





ಮುಲ್ಕಿ: ಹೊಸ ಅಂಗಣದ ದಶಮಾನೋತ್ಸವ ಸಂಭ್ರಮ ಅಕ್ಟೋಬರ್ 4 ಭಾನುವಾರ ಬಪ್ಪನಾಡು ಶ್ರೀ ಅನ್ನಪೂರ್ಣೇಶ್ವರಿ ಸಭಾಗೃಹ ದಲ್ಲಿ ನಡೆಯಲಿದ್ದು ಪೂರ್ವಭಾವಿಯಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಮಂಗಳವಾರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಕ್ಷೇತ್ರದ ಅರ್ಚಕರಾದ ನರಸಿಂಹ ಭಟ್ ರವರ ನೇತೃತ್ವದಲ್ಲಿ ಶ್ರೀ ದೇವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಮೂಲಕ ನಡೆಯಿತು.

ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಕಸಾಪ ಮಾಜೀ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು ಮಾತನಾಡಿ ಹೊಸ ಅಂಗಣದ ಕಾರ್ಯಕ್ರಮಗಳು ನಿರಂತರವಾಗಿ ನಡೆದು ಓದುಗರಿಗಾಗಿ ಒಳ್ಳೆಯ ಲೇಖಕರಿಂದ ಲೇಖನಗಳು ಬಂದು ಜನಪ್ರಿಯವಾಗಿದೆ. ದಶಮಾನೋತ್ಸವ ಕಾರ್ಯಕ್ರಮವು ಒಳ್ಳೆಯ ರೀತಿಯಿಂದ ನಡೆಯಲಿ ಎಂದು ಶುಭಹಾರೈಸಿದರು.

ಕಿನ್ನಿಗೋಳಿ ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪರವರು ಮಾತನಾಡುತ್ತಾ ಮೂಲ್ಕಿಯಲ್ಲಿ ಒಂದೇ ಒಂದು ಪತ್ರಿಕೆ ಪ್ರಕಟವಾಗುವುದು ಇದರ ಸಂಪಾದಕರು ಪತ್ರಿಕೆಯ ಗುಣ ಮಟ್ಟವನ್ನು ಕಾಯ್ದುಕೊಂಡು ಬಂದು, ಲೇಖಕರಿಗೆ ಸಂತೋಷದ ವಿಷಯ ಎಂದು ಹೇಳಿದರು. ತುಳು ವರ್ಲ್ಡ್ ಫೌಂಡೇಶನ್ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತುರವರು ಮಾತನಾಡುತ್ತಾ ಹೊಸ ಅಂಗಣ ಪತ್ರಿಕೆಯನ್ನು ನಾನು ನೋಡುತ್ತಾ ಇದ್ದೇನೆ ಅದೊಂದು ಓದುಗರ ಪತ್ರಿಕೆಯಾಗಿದೆ. ಇದು ಬೆಂಗಳೂರು, ಮುಂಬೈಯಲ್ಲಿರುವ ಓದುಗರ ಕೈ ಸೇರುತ್ತದೆ. ಕಾರ್ಯಕ್ರಮದ ಮನರಂಜನೆ ಮಾಡಿದ ಸಂಪಾದಕರಿಗೂ ಎಲ್ಲಾ ರೀತಿಯಿಂದ ಸಹಕಾರ ಸಿಕ್ಕಿ ಯಶಸ್ವಿಯಾಗಲಿ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಪ್ರಸಾದ್ ಭಟ್ ಬಪ್ಪನಾಡು, ವಾಸು ಪೂಜಾರಿ ಚಿತ್ರಾಪು,ಉದ್ಯಮಿ ಜಾನ್ ಕ್ವಾಡ್ರಾಸ್, ರಮೇಶ್‌ ಅಮೀನ್ ಕೊಕ್ಕರಕಲ್,ಸುರೇಂದ್ರ ಜಿ ಶೆಣೈ, ಮಹೀಮ್ ಹೆಗ್ಡೆ, ಸರೋಜಿನಿ ಸುವರ್ಣ, ಕರುಣಾಕರ ಪೂಜಾರಿ, ಉದಯಕುಮಾರ್ ಶೆಟ್ಟಿ ಅಧಿಧನ್, ಲತಾ ಶೇಖ‌ರ್ ಕೊಳಚಿ ಕಂಬಳ, ವಾಸು ಪೂಜಾರಿ ಕೊಲಕಾಡಿ, ಜಯಪಾಲ ಶೆಟ್ಟಿ ಐಕಳ, ಜೇಸಿ ದಿನೇಶ್ ಶೆಟ್ಟಿ, ರವಿಚಂದ್ರ ರಾವ್ ಮತ್ತಿತರರು ಉಪಸ್ಥಿತರಿದ್ದರು

ಹೊಸ ಅಂಗಣದ ಡಾ. ಹರಿಶ್ಚಂದ್ರ ಪಿ ಸಾಲ್ಯಾನ್ ಸ್ವಾಗತಿಸಿ ನಿರೂಪಿಸಿದರು.



Related posts

ಬೆಳ್ತಂಗಡಿ : ಬಿಲ್ಲವ ಸಮಾಜಕ್ಕೆ ಅವಹೇಳನ ಆರೋಪ – ಅನಿತಾ ಕಾಸರಗೋಡು ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು

Mumbai News Desk

ಯುವಕ ಸಂಘ ತೋಕೂರು,ಮಹಿಳಾ ಮಂಡಲ ತೋಕೂರು, ಹಾಗೂ ಪತಂಜಲಿ ಯೋಗ ಸಮಿತಿ ದಕ್ಷಿಣ ಕನ್ನಡ ಇದರ ಜಂಟಿ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ

Mumbai News Desk

ಕರ್ನಿರೆ: ಶ್ರೀ ಧರ್ಮ ಜಾರಂದಾಯ ದೈವಸ್ಥಾನದ ಕಾಲಾವಧಿ ನೇಮೋತ್ಸವ ಸಂಪನ್ನ

Mumbai News Desk

ಕುಕ್ಕೆ ಸುಬ್ರಹ್ಮಣ್ಯ ದರ್ಶನ ಸಮಯ ವಿಸ್ತರಣೆ: ಭಕ್ತರಿಗೆ ಸಿಗಲಿದೆ ಹೆಚ್ಚುವರಿ ಒಂದು ಗಂಟೆಯ ಕಾಲಾವಕಾಶ

Mumbai News Desk

ಲಯನ್ಸ್ ಕ್ಲಬ್ ಕೆಮ್ಮಣ್ಣು ಅಸ್ತಿತ್ವಕ್ಕೆ : ಸ್ಥಾಪಕ ಅಧ್ಯಕ್ಷರಾಗಿ ಜಗದೀಶ್ ಕೆಮ್ಮಣ್ಣು ಹಾಗೂ ಪದಾಧಿಕಾರಿಗಳ ಆಯ್ಕೆ

Mumbai News Desk

ಪಡುಮಾರ್ನಾಡು ಯುವಕ ಮಂಡಲದ ಅಧ್ಯಕ್ಷರಾಗಿ ತೀರ್ಥಂಗಡಿ ರಮೇಶ್ ಎಸ್. ಶೆಟ್ಟಿ, ಪ್ರಜ್ಞಾ ಯುವತಿ ಮಂಡಲದ ಅಧ್ಯಕ್ಷೆಯಾಗಿ ಅಮನೊಟ್ಟು ಸುನೀತಾ ಹೆಗ್ಡೆ ಆಯ್ಕೆ

Mumbai News Desk