
ವರದಿ. ಉಮೇಶ್ ಕೆ. ಅಂಚನ್
ಮುಂಬಯಿ, ಸೆ.1:ವಿದ್ಯಾದಾಯಿನಿ ಸಭಾ(ರಿ) ಫೋರ್ಟ್ ಮುಂಬಯಿ ವತಿಯಿಂದ 172ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಉತ್ಸವವನ್ನು ಅ. 28ರಂದು ಫೋರ್ಟ್ ರಘುನಾಥ್ ದಾದಾಜಿ ಸ್ಟ್ರೀಟ್ ನಲ್ಲಿರುವ ವಿದ್ಯಾದಾಯಿನಿ ಭವನದಲ್ಲಿರುವ ಕಚೇರಿಯ ವಠಾರದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಆರಂಭದಲ್ಲಿ ಸಭಾದ ಗೌರವಾಧ್ಯಕ್ಷ ಜೆ.ಎಮ್.ಕೋಟ್ಯಾನ್, ಉಪಾಧ್ಯಕ್ಷ ಆರ್.ಕೆ.ಕೋಟ್ಯಾನ್ ಹಾಗೂ ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಭಜನಾ ಸಮಿತಿಯ ಕಾರ್ಯಾಧ್ಯಕ್ಷ ಆಶೋಕ್ ಟಿ.ಪೂಜಾರಿಯವರ ನೇತೃತ್ವದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ಪ್ರಫುಲ್ ಚಂದ್ರ ಶ್ರೀಯಾನ್, ಪ್ರಕಾಶ್ ಶೆಟ್ಟಿ, ಮನೋಜ್ ಮೆಂಡನ್, ಯಶ್ ಕರ್ಕೇರಾ ಭಜನೆಯಲ್ಲಿ ಭಾಗವಹಿಸಿದ್ದರು .ದಿನೇಶ್ ಪೂಜಾರಿಯವರಿಂದ ಗುರು ಪೂಜೆ, ಮಹಾ ಮಂಗಳಾರತಿ ನಡೆದು ಪ್ರಸಾದ ವಿತರಣೆ ನಡೆಯಿತು.
ಕೋಶಾಧಿಕಾರಿ ಗೋಪಾಲ್ ಪೂಜಾರಿಯವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಗಣೇಶ್ ಪೂಜಾರಿ, ಸುರೇಶ್ ಪೂಜಾರಿ ಉಪಸ್ಥಿತರಿದ್ದು ಸಹಕರಿಸಿದ್ದರು.




