September 6, 2026
Mumbai News Kannada
ಸುದ್ದಿ

ಕುಲಾಲ ಸಂಘ ಮುಂಬೈ: ಚರ್ಚ್‌ಗೇಟ್–ದಹಿಸರ್ ಸಮಿತಿಯಿಂದ ಮಂತ್ರಾಲಯ ಪುಣ್ಯಕ್ಷೇತ್ರ ದರ್ಶನ





ಕುಲಾಲ ಸಂಘ ಮುಂಬೈಯ ಚರ್ಚ್ ಗೇಟ್–ದಹಿಸರ್ ಸ್ಥಳೀಯ ಸಮಿತಿ ಸದಸ್ಯರು ಫೆಬ್ರವರಿ 13ರ ರಾತ್ರಿ ಆರಂಭಿಸಿ 15ರ ಬೆಳಗ್ಗಿನವರೆಗೆ ಪವಿತ್ರ ಮಂತ್ರಾಲಯ ಕ್ಷೇತ್ರಕ್ಕೆ ಯಾತ್ರೆ ಕೈಗೊಂಡು, ರಾಘವೇಂದ್ರ ಸ್ವಾಮಿವರ ದರ್ಶನ ಪಡೆದು ಕೃಪಾಶೀರ್ವಾದ ಪಡೆದರು.

ಈ ಪವಿತ್ರ ಯಾತ್ರೆಯಲ್ಲಿ ಸಮಿತಿಯ ಪದಾಧಿಕಾರಿಗಳು, ಮಹಿಳಾ ಸದಸ್ಯರು ಹಾಗೂ ಯುವ ವಿಭಾಗದ ಸದಸ್ಯರು ಉತ್ಸಾಹದಿಂದ ಭಾಗವಹಿಸಿದರು. ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಭಜನೆ–ಸಂಕೀರ್ತನೆ ನಡೆಸಿ ಭಕ್ತಿಭಾವದಿಂದ ಪ್ರಾರ್ಥನೆ ಸಲ್ಲಿಸಿದರು. ಯಾತ್ರೆಯು ಎಲ್ಲರಲ್ಲೂ ಆಧ್ಯಾತ್ಮಿಕ ಚೈತನ್ಯ ಮತ್ತು ಏಕತೆ ಹೆಚ್ಚಿಸುವ ಸ್ಮರಣೀಯ ಅನುಭವವಾಗಿ ಪರಿಣಮಿಸಿತು.

B. Dinesh Kulal

Mob.: 9821868674



Related posts

ಉಡುಪಿ : 70ನೇ ಕನ್ನಡ ರಾಜ್ಯೋತ್ಸವ ಆಚರಣೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ: ಪ್ರಶಸ್ತಿ ಸ್ವೀಕರಿಸಿದ ಮುಂಬೈಯ ಸಮಾಜ ಸೇವಕ, ಕಲಾ ಪೋಷಕ ನವೀನ್ ಎಮ್ ಪೂಜಾರಿ ಪಡು ಇನ್ನಾ

Mumbai News Desk

ಕರ್ನಾಟಕದ ಜನರಿಗೆ ಹೊಸ ವರ್ಷಕ್ಕೆ ಶಾಕ್ ನೀಡಿದ ಸರ್ಕಾರ – ಬಸ್ ಪ್ರಯಾಣ ದರ ಶೇಕಡ 15ರಷ್ಟು ಏರಿಕೆ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವಿಶೇಷ ಸಭೆ :

Mumbai News Desk

ಭಾರತ್ ಬ್ಯಾಂಕ್ ಕುರಿತು ಪತ್ರಿಕೆಯಲ್ಲಿ ಸುಳ್ಳು ಸುದ್ದಿ ಪ್ರಕಟಣೆಯ ಬಗ್ಗೆ, ಬ್ಯಾಂಕ್ ನ ಎಂ ಡಿ ಮತ್ತು ಸಿ ಇ ಓ ವಿದ್ಯಾನಂದ ಕರ್ಕೇರರಿಂದ ಸ್ಪಷ್ಟನೆ

Mumbai News Desk

ಗಮ್ಮತ್ ಕಲಾವಿದೆರ್ ಅವರ ‘ಪೋನಗ ಕೊನೊಪರ’ ನಾಟಕದ ಮುಹೂರ್ತ

Mumbai News Desk

ಶ್ರದ್ಧಾಂಜಲಿ: ದಿನೇಶ್ ಆನಂದ್ ಹೆಗ್ಡೆ ಅವರ ನಿಧನ

Mumbai News Desk