ಮುಂಬೈ: ಯಾವುದೇ ಒಂದು ಸಂಘ-ಸಂಸ್ಥೆಯನ್ನು ಸ್ಥಾಪಿಸುವ ಮೂಲ ಉದ್ದೇಶ ಅದು ಜನಸಾಮಾನ್ಯರನ್ನು ತಲುಪುವುದಾಗಿರಬೇಕು. ಅದರ ಧ್ಯೇಯೋದ್ದೇಶಗಳು ಸಮಾಜದ ಏಳಿಗೆಗೆ ಪೂರಕವಾಗಿದ್ದಾಗ ಮಾತ್ರ ಆ ಸಂಸ್ಥೆಯು ಸಾರ್ಥಕತೆ ಪಡೆಯಲು ಸಾಧ್ಯ. ಅಂತಹ ಉದಾತ್ತ ಚಿಂತನೆಗಳೊಂದಿಗೆ ಮುನ್ನಡೆಯುತ್ತಿರುವ ಹೆಮ್ಮೆಯ ಸಂಸ್ಥೆ ‘ತುಲುವೆರೆ ಕಲ’.
ತುಳು ಭಾಷೆಯನ್ನು ಉಳಿಸಿ, ಬೆಳೆಸಿ, ಅದಕ್ಕೊಂದು ಸೂಕ್ತ ಮಾನ್ಯತೆ ದೊರಕಿಸಿಕೊಡುವ ನಿಟ್ಟಿನಲ್ಲಿ ಮತ್ತು ತುಳು ನಾಡಿನ ಸಂಸ್ಕೃತಿಯ ಪರಿಮಳವನ್ನು ವಿಶ್ವದಾದ್ಯಂತ ಪಸರಿಸುವ ಕಳಕಳಿಯೊಂದಿಗೆ ಈ ಸಂಸ್ಥೆ ಕಾರ್ಯಪ್ರವೃತ್ತವಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಸ್ಥಾಪನೆಗೊಂಡ ಈ ಸಂಸ್ಥೆಯು ಈಗಾಗಲೇ ಹಲವಾರು ಜನಪರ ಹಾಗೂ ಯಶಸ್ವಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ತುಳು ಭಾಷೆಯ ವಿಕಾಸಕ್ಕೆ ನಿರಂತರವಾಗಿ ಸ್ಪಂದಿಸಿ, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಮುಂಬೈನಲ್ಲಿ ಚೊಚ್ಚಲ ವಾರ್ಷಿಕೋತ್ಸವ
ಮಾತೃಭಾಷೆಯ ವೃದ್ಧಿಗಾಗಿ ಇದರ ಉಪವಿಭಾಗವಾಗಿ ಮುಂಬೈನಲ್ಲಿ ಸ್ಥಾಪನೆಗೊಂಡಿರುವ ‘ತುಲುವೆರೆ ಕಲ ಬೊಂಬೈ ಎಗ್ಗೆ’ ಸಂಸ್ಥೆಯು ಹೊರನಾಡಿನಲ್ಲೂ ತುಳು ಭಾಷೆಯ ಅಸ್ಮಿತೆಯನ್ನು ವಿಸ್ತರಿಸುವ ಮಹತ್ತರ ಕಾಳಜಿಯನ್ನು ಹೊಂದಿದೆ. ಈ ಸಂಸ್ಥೆಯ ಚೊಚ್ಚಲ ವಾರ್ಷಿಕೋತ್ಸವವು ಇದೇ ಆಗಸ್ಟ್ 30ರಂದು ಡೊಂಬಿವಿಲಿಯ ‘ಪ್ರೀತಿ ಬ್ಯಾಂಕ್ವೆಟ್ ಹಾಲ್’ನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ಜರುಗಲಿದೆ.
ಹಾಸ್ಯ ಕವಿಗೋಷ್ಠಿ: ಆಸಕ್ತರಿಂದ ಅರ್ಜಿ ಆಹ್ವಾನ
ವಾರ್ಷಿಕೋತ್ಸವದ ಅಂಗವಾಗಿ ಮುಂಬೈ ವಲಯದ ತುಳು-ಕನ್ನಡಿಗ ಕವಿ ಮತ್ತು ಕವಯತ್ರಿಯರಿಗಾಗಿ ವಿಶೇಷ ‘ಹಾಸ್ಯ ಕವಿಗೋಷ್ಠಿ’ಯನ್ನು ಆಯೋಜಿಸಲಾಗಿದೆ. ಈ ಕವಿಗೋಷ್ಠಿಯಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು ಜುಲೈ 5ರ ಒಳಗೆ ಕೆಳಗಿನ ಪದಾಧಿಕಾರಿಗಳ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗಿ ಸಂಸ್ಥೆಯ ಪ್ರಕಟಣೆ ಕೋರಿದೆ.
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು:
ಪ್ರಫುಲ್ಲಾ ಶೆಟ್ಟಿ (ಕಾರ್ಯಾಧ್ಯಕ್ಷೆ) – 90296 66675
ಶೋಭಾ ಎಸ್. ಶೆಟ್ಟಿ (ಕಾರ್ಯದರ್ಶಿ) – 97022 11551
ಸವಿತಾ ಸಾಲ್ಯಾನ್ (ಜೊತೆ ಕಾರ್ಯದರ್ಶಿ) – 98928 50309
ಮೈನಾ ಶೆಟ್ಟಿ (ಕೋಶಾಧಿಕಾರಿ) – 93210 97128
ಕುಮುದಾ ಶೆಟ್ಟಿ (ಸಾಹಿತ್ಯ ಸಮಿತಿ) – 96190 26965




