29 C
Mumbai
August 28, 2026
Mumbai News Kannada
ಮುಂಬಯಿ

ಫೋರ್ಟ್ ವಿದ್ಯಾದಾಯಿನಿ ಸಭಾ(ರಿ), ಮುಂಬಯಿ ಇದರ 105 ನೇ ವಾರ್ಷಿಕ ಮಹಾಸಭೆ.





ಚಿತ್ರ ವರದಿ: ಉಮೇಶ್ ಕೆ ಅಂಚನ್

ಮುಂಬಯಿ, ಅ.28: ವಿದ್ಯಾದಾಯಿನಿ ಸಭಾ (ರಿ), ಫೋರ್ಟ್ ಮುಂಬಯಿ ಇದರ 105ನೇ ವಾರ್ಷಿಕ ಮಹಾಸಭೆಯು ಅ.26ರಂದು ಫೋರ್ಟ್ 31 ರಘುನಾಥ್ ದಾದಾಜಿ ಸ್ಟ್ರೀಟ್ ನಲ್ಲಿರುವ ವಿದ್ಯಾದಾಯಿನಿ ಭವನದ ಕಚೇರಿಯಲ್ಲಿ ಸಭಾದ ಅಧ್ಯಕ್ಷರಾರ ಪುರುಷೋತ್ತಮ ಎಸ್.ಕೋಟ್ಯಾನ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಜತೆ ಕಾರ್ಯದರ್ಶಿ ಶರತ್ ಪೂಜಾರಿ ವಾರ್ಷಿಕ ವರದಿಯನ್ನು ವಾಚಿಸಿ ಕೋಶಾಧಿಕಾರಿ ಗೋಪಾಲ್ ಪೂಜಾರಿಯವರು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು ಹಾಗೂ ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಮುಂದಿನ ವರ್ಷಕ್ಕೆ ಮಾಹಾಂಡಿಕ್ ಎಂಡ್ ಕಂಪನಿಯವರನ್ನು ಲೆಕ್ಕಪರಿಶೋಧಕರನ್ನಾಗಿ ಪುನರ್ ನೇಮಿಸಲಾಯಿತು.
ಸಭಾ ಹಾಗೂ ಸಭಾದ ಸಂಚಾಲಕತ್ವದಲ್ಲಿರುವ ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಯ ಶತಮಾನೋತ್ಸವ ಆಚರಣೆಯ ಕುರಿತು ಶ್ರೀನಿವಾಸ್ ಪೂಜಾರಿ, ಜಿ.ಸಿ.ಸಾಲ್ಯಾನ್, ಜೆ.ಜೆ.ಕೋಟ್ಯಾನ್, ಆರ್.ಕೆ.ಕೋಟ್ಯಾನ್, ವಸಂತಿ ಕೋಟ್ಯಾನ್, ಜೆ.ಎಮ್.ಕೋಟ್ಯಾನ್, ಉಮೇಶ್ ಕೆ ಅಂಚನ್, ಅಶೋಕ್ ಪೂಜಾರಿ , ಸುರೇಶ್ ಪೂಜಾರಿ, ಗಣೇಶ್ ಪೂಜಾರಿ, ರಾಮಣ್ಣ ಪೂಜಾರಿ ಹಾಗೂ ವಸಂತ್ ಪೂಜಾರಿಯವರು ಮಾತನಾಡಿ ಸಲಹೆ ಸೂಚನೆ ನೀಡಿದರು.
ಸಭಾದ ಅಧ್ಯಕ್ಷ ಪುರುಷೋತ್ತಮ ಎಸ್.ಕೋಟ್ಯಾನ್ ಮಾತನಾಡಿ 105 ವರ್ಷ ಪೂರೈಸಿರುವ ನಮ್ಮೀ ಸಂಸ್ಥೆಯ ಶತಮಾನೋತ್ಸವ ಸಮಾರಂಭವನ್ನು ನಾವು ವಿಜ್ರಂಭಣೆಯಿಂದ ಆಚರಿಸಿದ್ದೇವೆ. ಪ್ರಸ್ತುತ ವರ್ಷದಲ್ಲಿ ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಯು ಶತಮಾನೋತ್ಸವ ಆಚರಣೆಗೆ ಅಣಿಯಾಗಿದೆ. ಈ ಸಮಾರಂಭವನ್ನು ನೂತನ ವರ್ಷದ ಮೊದಲ ತಿಂಗಳಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ಈ ವಿದ್ಯಾಸಂಸ್ಥೆಯಲ್ಲಿ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ನಾಮಾಂಕಿತ ಹುದ್ದೆ ಯಾ ಉದ್ಯೋಗದಲ್ಲಿದ್ದಾರೆ. ಅವರನ್ನೆಲ್ಲಾ ಈ ಸಮಾರಂಭದಲ್ಲಿ ಒಗ್ಗೂಡಿಸುವ ಕಾರ್ಯವನ್ನು ಮಾಡಬೇಕಾಗಿದೆ. ಇದಕ್ಕೆ ಸರ್ವ ಸದಸ್ಯರು ಸಹಾಯ ಸಹಕಾರ ನೀಡಬೇಕು ಎಂದರು.
ಆರಂಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಹಾಸಭೆಗೆ ಚಾಲನೆ ನೀಡಲಾಯಿತು. ಪ್ರಸ್ತುತ ವರ್ಷದಲ್ಲಿ ಭಗವಂತನ ಪಾದ ಸೇರಿದ್ದ ಸಭಾದ ಸದಸ್ಯರನ್ನು ಮೌನ ಪ್ರಾರ್ಥನೆಯೊಂದಿಗೆ ಸ್ಮರಿಸಲಾಯಿತು. ಜತೆ ಕಾರ್ಯದರ್ಶಿ ಶರತ್ ಪೂಜಾರಿಯವರು ಆಗಮಿಸಿದ್ದ ಸರ್ವ ಸದಸ್ಯರನ್ನು ವಂದಿಸುವುದರೊಂದಿಗೆ ಮಹಾಸಭೆಯು ಮುಕ್ತಾಯವಾಯಿತು.



Related posts

ಎನ್ಲೈಟನ್ ಫೌಂಡೇಶನ್ ಧಾರವಿ, ಏಳನೆ ವಾರ್ಷಿಕೋತ್ಸವ:

Mumbai News Desk

ಕನ್ನಡ ನವತಾರಾ ಕಲಾ ಮಂಡಳಿ ಮಲಾಡ್ (ಪ): 51ನೇ ವಾರ್ಷಿಕ ಮಹಾಪೂಜೆ, ಸಾಧಕರಿಗೆ ಸನ್ಮಾನ ಹಾಗೂ ಯಕ್ಷಗಾನ

Mumbai News Desk

ಮಲಾಡ್ ಪೂರ್ವದ ಶ್ರೀ ದೇವಿ  ಮಹಮ್ಮಾಯಿ ದೇವಸ್ಥಾನ ದೇವಸ್ಥಾನದ  ವಾರ್ಷಿಕ ಮಹೋತ್ಸವ ಮತ್ತು ಪಾಲ್ಕಿ ಉತ್ಸವ ಭಕ್ತಿ ಸಂಭ್ರಮದೊಂದಿಗೆ ಸಂಪನ್ನ

Mumbai News Desk

ಭಾರತ್ ಬ್ಯಾಂಕಿನ ಅಂಧೇರಿ ಪೂರ್ವದ ಶಾಖೆಯ 30ನೇ ವರ್ಷ ಆಚರಣೆಯ ಸಂಭ್ರಮ.

Mumbai News Desk

ಗೋಕುಲದಲ್ಲಿ ಅತ್ಯಂತ ಸಂಭ್ರಮದಿಂದ ವೈಭವೀಕರಿಸಿದ  “ಪುರುಷರ ಮಹಾ ದಿನ” – ಪ್ರತಿಭಾ ಪ್ರದರ್ಶನ”

Mumbai News Desk

ಡೊಂಬಿವಲಿ ಶ್ರೀ ಜೈ ಭವಾನಿ ಶನೀಶ್ವರ ಮಂದಿರದ ಅಷ್ಟಬಂಧ ಪುನರ್‌ ಪ್ರತಿಷ್ಠಾ ಮಹೋತ್ಸವ ಸಂಪನ್ನ

Mumbai News Desk