July 23, 2026
Mumbai News Kannada
ಸುದ್ದಿ

ಕಾಪು ರಂಗತರಂಗದ ಸ್ಥಾಪಕ ಸದಸ್ಯ, ತುಳು ನಾಟಕ ರಂಗದ ಪ್ರತಿಭಾನ್ವಿತ ನಟ ಸುಜಿತ್ ಶೆಟ್ಟಿ ಪಾದೂರು ನಿಧನ







ಕಾಪು ತುಳು ರಂಗಭೂಮಿಯ ಹಿರಿಯ ಕಲಾವಿದ ಹಾಗೂ ಕಾಪು ರಂಗತರಂಗ ತಂಡದ ಸ್ಥಾಪಕ ಸದಸ್ಯ ಸುಜಿತ್ ಶೆಟ್ಟಿ ಪಾದೂರು (54) ಅವರು ಏಪ್ರಿಲ್ 3ರಂದು ನಿಧನರಾದರು. ಸುಜಿತ್ ಶೆಟ್ಟಿ ಅವರು ರಂಗಭೂಮಿಯಲ್ಲಿ ಹಾಸ್ಯ ಮತ್ತು ಸಾಮಾಜಿಕ ಕಳಕಳಿಯ ಪಾತ್ರಗಳ ಮೂಲಕ ಪ್ರೇಕ್ಷಕರ ಅಪಾರ ಪ್ರೀತಿ ಗಳಿಸಿದ್ದರು. ಕೆ. ಲೀಲಾಧರ ಶೆಟ್ಟಿ ಅವರ ನೇತೃತ್ವದ ಕಾಪು ರಂಗತರಂಗ ತಂಡದ ಆರಂಭದ ದಿನಗಳಿಂದಲೂ ಸಕ್ರಿಯರಾಗಿದ್ದ ಇವರು, ತಂಡದ ಸಂಘಟನಾತ್ಮಕ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ಕಳೆದ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಟನೆಯಿಂದ ದೂರ ಉಳಿದಿದ್ದರು.
ಅವರ ನಿಧನಕ್ಕೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಪ್ರಮುಖರಾದ ಕೆ. ವಾಸುದೇವ ಶೆಟ್ಟಿ, ಮನೋಹರ ಎಸ್. ಶೆಟ್ಟಿ, ನಡಿಕೆರೆ ರತ್ನಾಕರ ಶೆಟ್ಟಿ ಹಾಗೂ ಕಾಪು ರಂಗತರಂಗ ಮತ್ತು ತುಳು ರಂಗಭೂಮಿಯ ಕಲಾವಿದರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರು ಪತ್ನಿ, ಕಾಪು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಶಶಿಪ್ರಭಾ ಶೆಟ್ಟಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.



Related posts

ಬೊಯಿಸರ್ ಸೋಮೇಶ್ವರ ಮಂದಿರದ 15 ನೆಯ ವರ್ಧಂತ್ಯುತ್ಸವ ಸಂಪನ್ನ.

Mumbai News Desk

ಉಡುಪಿ : ಕನಕನ ಕಿಂಡಿ ಸ್ವರ್ಣ ಕವಚ ಉದ್ಘಾಟನೆ ವಿವಾದ : ಕಡೆಗಣನೆ ಆರೋಪಗಳನ್ನು ತಳ್ಳಿ ಹಾಕಿದ ಪ್ರಮೋದ್ ಮಧ್ವರಾಜ್

Mumbai News Desk

ಮುಲ್ಕಿ : ಟೆಂಪೋ ಡಿಕ್ಕಿಯಾಗಿ ಉದ್ಯಮಿ ಲಿಂಗಪ್ಪ ಶೆಟ್ಟಿ ನಿಧನ

Mumbai News Desk

ಮಹಾರಾಷ್ಟ್ರ, ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟ : ನ. 20 ರಂದು ರಾಜ್ಯದಲ್ಲಿ ಮತದಾನ

Mumbai News Desk

ಸಮಾಜ ಸೇವೆಗೆ ಕನ್ಯಾನ ಸದಾಶಿವ ಶೆಟ್ಟಿ ಭಾವುಕ ವಿದಾಯ

Mumbai News Desk

ಹಿರಿಯ ಪತ್ರಕರ್ತ ಶ್ರೀಧರ್‌ ಉಚ್ಚಿಲ್‌ಗೆ ‘ಕೆಯುಡಬ್ಲ್ಯೂಜೆ’ ವಿಶೇಷ ಪ್ರಶಸ್ತಿ ಪ್ರದಾನ

Mumbai News Desk