
ಮಂಗಳೂರು: ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ಅರ್ಹ ಬಡ ಕುಟುಂಬಗಳ ಹೆಣ್ಣುಮಕ್ಕಳ ವಿವಾಹಕ್ಕೆ ನೆರವಾಗುವ ನಿಟ್ಟಿನಲ್ಲಿ ಮುತ್ತೂಟ್ ಫೈನಾನ್ಸ್ ಆಯೋಜಿಸಿದ್ದ ‘ಮುತ್ತೂಟ್ ವಿವಾಹ ಸಮ್ಮಾನ 2026’ ಕಾರ್ಯಕ್ರಮವು ಶನಿವಾರ ನಗರದ ಸಿ.ಓ.ಡಿ.ಪಿ (CODP) ಎನ್.ಜಿ.ಓ ಸಭಾಂಗಣದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಜರುಗಿತು. ಮಂಗಳೂರಿನ ಖ್ಯಾತ ನ್ಯಾಯವಾದಿಗಳಾದ ಶ್ರೀಮತಿ ಸೋನಿ ವಿ. ಅವರು ಕೇಕ್ ಕತ್ತರಿಸುವ ಮೂಲಕ ಈ ಜನೋಪಕಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮುತ್ತೂಟ್ ಫೈನಾನ್ಸ್ ಸಂಸ್ಥೆಯು ಲಾಭದ ಉದ್ದೇಶದ ಜೊತೆಗೆ ಸಮಾಜದ ಕಟ್ಟಕಡೆಯ ಜನರ ಕಷ್ಟಕ್ಕೆ ಸ್ಪಂದಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವಿಧವಾ ತಾಯಂದಿರ ಒಟ್ಟು 10 ಮಂದಿ ಹೆಣ್ಣುಮಕ್ಕಳನ್ನು ವಿಶೇಷವಾಗಿ ಗುರುತಿಸಿ, ಅವರ ವಿವಾಹದ ನಂತರದ ಜೀವನದ ವೆಚ್ಚಗಳಿಗಾಗಿ ತಲಾ 50,000/- ರೂ.ಗಳ ಆರ್ಥಿಕ ಧನಸಹಾಯದ ಚೆಕ್ ಅನ್ನು ವಿತರಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುತ್ತೂಟ್ ಫೈನಾನ್ಸ್ನ ಪ್ರಾದೇಶಿಕ ವ್ಯವಸ್ಥಾಪಕ ಪ್ರಶಾಂತ್ ನಾಯಕ್, ಮೂಲತ್ವ ಫೌಂಡೇಶನ್ ಸಂಸ್ಥಾಪಕ ಪ್ರಕಾಶ್ ಕೋಟ್ಯಾನ್, ಪೃಥ್ವಿ ಸೇವಾ ಟ್ರಸ್ಟ್ನ ಲೋಲಾಕ್ಷಿ ಫೆರ್ನಾಂಡಿಸ್, ಕ್ಲಸ್ಟರ್ ಮ್ಯಾನೇಜರ್ ಸಂದೇಶ್ ಶೆಣೈ ಮತ್ತು ವಿಜಿಲೆನ್ಸ್ ಆಫೀಸರ್ ತಾರಾನಾಥ ವಿ. ಅವರು ಪಾಲ್ಗೊಂಡು ಫಲಾನುಭವಿಗಳಿಗೆ ಹಾರೈಸಿದರು. ಅಲ್ಲದೆ ಸಂಸ್ಥೆಯ ಪ್ರಮುಖರಾದ ಶ್ರೀಮತಿ ಮೋನಿಷಾ ವಿ.ಕೆ. (ROM), ಹಂಪನಕಟ್ಟೆ ಶಾಖಾ ವ್ಯವಸ್ಥಾಪಕಿ ಸೀಮಲತಾ, ಪಿ.ವಿ.ಎಸ್ ಶಾಖಾ ವ್ಯವಸ್ಥಾಪಕಿ ಗಾಯತ್ರಿ ನಾಯಕ್, ಕದ್ರಿ ಶಾಖಾ ವ್ಯವಸ್ಥಾಪಕಿ ಚಂದ್ರಶೇಖರ್ ಯು. ಹಾಗೂ ಸಿ.ಎಸ್.ಆರ್ ಮ್ಯಾನೇಜರ್ ಪ್ರಸಾದ್ ಕುಮಾರ್ ಅವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಈ ಯೋಜನೆಯು ಬಡ ಹೆಣ್ಣುಮಕ್ಕಳ ಬದುಕಿಗೆ ಭರವಸೆಯ ಬೆಳಕಾಗಿದ್ದು, ಪ್ರತಿವರ್ಷವೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಸಂಖ್ಯೆಯ ಫಲಾನುಭವಿಗಳಿಗೆ ನೆರವು ನೀಡುವ ಗುರಿಯನ್ನು ಹೊಂದಿರುವುದಾಗಿ ಸಂಘಟಕರು ಇದೇ ವೇಳೆ ಪ್ರಕಟಿಸಿದರು.

ಮುತ್ತೂಟ್ ಫೈನಾನ್ಸ್ನ ಈ ‘ವಿವಾಹ ಸಮ್ಮಾನ 2026’ ಕೇವಲ ಒಂದು ಧನಸಹಾಯ ಕಾರ್ಯಕ್ರಮವಾಗಿ ಉಳಿಯದೆ, ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳ ಪಾಲಿಗೆ ಭರವಸೆಯ ಆಶಾಕಿರಣವಾಗಿ ಮೂಡಿಬಂದಿದೆ. ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯಡಿ (CSR) ಇಂತಹ ಮಾನವೀಯ ಕೈಂಕರ್ಯಗಳು ಸಮಾಜದ ಸಬಲೀಕರಣಕ್ಕೆ ನಾಂದಿ ಹಾಡಲಿವೆ. ಸಂಸ್ಥೆಯ ಈ ಉದಾತ್ತ ಕಾರ್ಯವು ಬಡ ಹೆಣ್ಣುಮಕ್ಕಳ ಬಾಳಿನಲ್ಲಿ ಹೊಸ ಭರವಸೆಯನ್ನು ತುಂಬಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಸಮಾಜದ ಹಿತದೃಷ್ಟಿಯಿಂದ ಇಂತಹ ಸೇವಾ ಕಾರ್ಯಗಳು ನಿರಂತರವಾಗಿ ಮುಂದುವರಿಯಲಿ ಎನ್ನುವುದು ನೆರೆದಿದ್ದ ಎಲ್ಲರ ಹಾರೈಕೆಯಾಗಿತ್ತು.




