28.7 C
Mumbai
June 30, 2026
Mumbai News Kannada
ಸುದ್ದಿ

ಮಧೂರು ಕ್ಷೇತ್ರ ಮಹಾತ್ಮೆ” ಸಹಿತ ಅನೇಕ ಪ್ರಸಂಗ ಕಾವ್ಯ ಬರೆದ ಕಾಸರಗೋಡಿಮಧೂರು ವೆಂಕಟಕೃಷ್ಣ ನಿಧನ.






ಮಧೂರು ಜೂನ್ 29:
ಗಡಾನಾಡು ಕಾಸರಗೋಡಿನ ಹಿರಿಯ ಪ್ರಸಂಗಕರ್ತ ಯಕ್ಷಗಾನ ಅರ್ಥಧಾರಿ, ನಿವೃತ್ತ ಸೇಲ್ ಟೇಕ್ಸ್ ಅಧಿಕಾರಿ ಮಧೂರು
ವೆಂಕಟಕೃಷ್ಣ (87) ನಿಧನರಾಗಿದ್ದಾರೆ.
ಮೃತರು ಪತ್ಧಿ ಸುಮಿತ್ರಾ ಹಾಗೂ ಇಬ್ಬರು ಪುತ್ರರು ಸಹಿತ ಓರ್ವ ಮಗಳು ಹಾಗೂ ಅಪಾರ ಆಪ್ತ ವಲಯವನ್ನು ಅಗಲಿದ್ದಾರೆ.

ಕಾಸರಗೋಡಿನ ಮಾರಾಟ ತೆರಿಗೆ ಇಲಾಖೆ ಅಧಿಕಾರಿಯಾಗಿ ನಿವೃತ್ತರಾದ ಅವರು ಉಳಿಯ ಧನ್ವಂತರಿ ಯಕ್ಷಗಾನ ಸಂಘದ ನೆರಳಲ್ಲಿ ಅರ್ಥಧಾರಿ, ವೇಷಧಾರಿ, ಕಲಾವಿದನಾಗಿ ಮೆರೆದವರು. ತೆಂಕಣ ಯಕ್ಷಗಾನದ ದಂತಕಥೆ ಕೂಡ್ಲು ನಾರಾಯಣ ಬಲ್ಯಾಯರ ಶಿಷ್ಯನಾಗಿ ಯಕ್ಷಗಾನ ಶಿಕ್ಷಣ ಪಡೆದ ಅವರು ಪ್ರಸಂಗಕರ್ತನಾಗಿ ಮೆರೆದವರು. ಅವರ ಸಾಧನೆ ಮಾನಿಸಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಅವರಿಗೆ ರಾಜ್ಯ ಪ್ರಶಸ್ತಿಯನ್ನಿತ್ತು ಗೌರವಿಸಿದೆ.ಜನಪ್ರಿಯವಿದ ಮಧೂರು ಕ್ಷೇತ್ರಮಹಾತ್ಮೆ ಸಹಿ ವೖಶಾಲಿನಿ ಪರಿಣಯ, ಧನ್ವಂತರಿ ಮಹಾತ್ಮೆ, ಹಲವಾರು ಕ್ಷೇತ್ರ ಮಹಾತ್ಮೆ, ನದಿಯಾಗಿ ಹರಿದ ನಂದಿನಿ, ದುಂಬಿಯಾಗಿ ನೆಗೆದ ಭ್ರಾಮರಿ ಹೀಗೆ ಅನೇಕ ಪ್ರಸಂಗಗಳನ್ನು ರಚಿಸಿದ ಇವರ ಕೃತಿಗಳು ಮೇಳದ ಆಟ, ತಾಳಮದ್ದಳೆ ಕೂಟಗಳಲ್ಲಿ ಜನಪ್ರಿಯವಾಗಿವೆ. ಇವರ ಕಾವ್ಯ ರಚನೆಗಳು ವಿವಿಧ ಭಾಗವತರ ಕಂಠದಲ್ಲಿ ಹಾಡಲ್ಪಟ್ಟು ಜಾಲತಾಣದ ಮೂಲಕ ಸಹಸ್ರಾರು ಕೇಳುಗರನ್ನು ತಲುಪಿದೆ.

ಯಕ್ಷಗಾನದಲ್ಲಿ ಮೊದಲು ವಂದಿಸುವ ಮಧೂರು ಕ್ಷೇತ್ರದ ಮುಂಬಾಗಿಲಿನ ಬಳಿ ವಾಸಿಸುವ ಅವರು ಬರೆದ” ಮಧೂರು ಕ್ಷೇತ್ರ ಮಹಾತ್ಮೆ” ಇತ್ತೀಚಿನ ಮಧೂರು ಬ್ರಹ್ಮಕಲಶದ ವೇಳೆ ಪ್ರದರ್ಶನ ಕಂಡಿತ್ತು. ಆ ವೇದಿಕೆಯಲ್ಲಿ ಅವರನ್ನು ಸನ್ಮಾನಿಸಲಿಗಿತ್ತು.
ಶಿವಳ್ಳಿ ಧ್ವನಿ ಪತ್ರಿಕೆಯ. ಮಾಜಿ ಸಂಪಾದಕರೂ ಆಗಿದ್ದ ಅವರ ನಿಧನಕ್ಕೆ ಕಾಸರಗೋಡಿನ ಶಿವಳ್ಳಿ ಮಹಾಸಭಾ ಗಾಢ ಸಂತಾಪ ಪ್ರಕಟಿಸಿದೆ.
ತೆಂಕಣ ಯಕ್ಷಗಾನದ ಅನೂಭವಿಯಾಗಿದ್ದ ಅವರು ಅರ್ಥಗಾರಿಕೆ ಮೂಲಕ ಗತ ಕಾಲದ ಪ್ರಸಿದ್ಧರ ಹಾಡುಗಾರಿಕೆ ಆಲಿಸಿ, ಅರ್ಥವಿಸಿ ಬೆಳೆದವರು. ಅವರ ಪ್ರಸಂಗಗಳು ತೆಂಕಿನ ಎಲ್ಲಾ ಮೇಳಗಳಲ್ಲೂ ಜನಪ್ರಿಯವಾಗಿದೆ.



Related posts

ಮಹಾರಾಷ್ಟ್ರದ ಪಾಲ್ಘರ್ ನಲ್ಲಿ ಪತ್ತೆಯಾದ ಭಾಗ್ಯಶ್ರೀ ಯ ಪರಿವಾರ ಹುಡುಕ ಬಲ್ಲಿರಾ ?

Mumbai News Desk

ನಿಟ್ಟೆ ಶಿಕ್ಷಣ ಟ್ರಸ್ಟ್‌ನ ಸಂಸ್ಥಾಪಕ ಎನ್ ವಿನಯ ಹೆಗ್ಡೆ ನಿಧನ

Mumbai News Desk

ಗೋಕುಲದಲ್ಲಿ ಸಂಭ್ರಮದ ತುಳಸೀ ವಿವಾಹ  (ಉತ್ಹಾನ ದ್ವಾದಶಿ ) ಆಚರಣೆ 

Mumbai News Desk

ಭಾಯಂದರ್:ಸ್ನೇಹಲತಾ ವಿಶ್ವನಾಥ ಪೂಜಾರಿ ನಿಧನ

Mumbai News Desk

ನೇತ್ರಾವತಿ ನದಿ ನೀರು ಕಲುಷಿತ – ಸರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ತೋನ್ಸೆ ಜಯಕ್ರಷ್ಣ ಶೆಟ್ಟಿ ಆಗ್ರಹ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ.ಮಹಾ ನಿರ್ದೇಶಕರಾಗಿ  ಉದ್ಯಮಿ, ಮೀರಾ ಭಯಂಧರ್ ನ್ ಮಾಜಿ ನಗರ ಸೇವಕ ಅರವಿಂದ್ ಆನಂದ್ ಶೆಟ್ಟಿ ಆಯ್ಕೆ,

Mumbai News Desk