
.
.
ವರದಿ- ಉಮೇಶ್ ಕೆ. ಅಂಚನ್.
ಧಾರ್ಮಿಕದೊಂದಿಗೆ ಸಮಾಜ ಸೇವೆ ಮಾಡುತ್ತಿರುವ ಕಾಲಘೋಡಾ ಶ್ರೀ ಸಾಯಿಬಾಬಾ ಪೂಜಾ ಸಮಿತಿಯ ಸದಸ್ಯರು ಡಿ. 29 ರಂದು ಮಲಾಡ್ ಪೂರ್ವದ ‘ಸ್ನೇಹ ಸಾಗರ್’ ಅನಾಥಾಶ್ರಮ ಮತ್ತು ವೃದ್ದಾಶ್ರಮಕ್ಕೆ ಬೇಟಿ ನೀಡಿ ಸುಮಾರು ಐವತ್ತು ಸಾವಿರಕ್ಕಿಂತಲೂ ಹೆಚ್ಚಿನ ಅಗತ್ಯ ವಸ್ತುಗಳನ್ನು ನೀಡಿದರು.ಅದರಲ್ಲಿ ಆಹಾರ ಪದಾರ್ಥಗಳು, ಖಾದ್ಯ ತೖಲ, ಟೂತ್ ಪೇಸ್ಟ್ ಮತ್ತು ಬ್ರಷ್, ಸಾಬೂನು, ಹೊದಿಕೆ ವಸ್ತ್ರಗಳು, ಟವೆಲ್, ತಿಂಡಿತಿನಿಸುಗಳು, ಆಶ್ರಮಕ್ಕೆ ಒಂದು ಹೊಲಿಗೆ ಯಂತ್ರ ಹಾಗೂ ಒಂದು ಮೊಬೖಲನ್ನು ನೀಡಿದ್ದರು. ಸಮಿತಿಯ ಅದ್ಯಕ್ಷ ಮಾದವ ಎಸ್. ಶೆಟ್ಟಿ, ಕಾರ್ಯದರ್ಶಿ ಫ್ರೊ. ಕೇಶವ ಎಚ್. ಕರ್ಕೇರ ಇವೆಲ್ಲವನ್ನು ಆಶ್ರಮದ ಉಸ್ತುವಾರಿ ಸಿಸ್ಟರ್ ಮಾರ್ತಾ ಮೊಂಡಲ್ ಹಾಗೂ ಅವರ ಸಹಾಯಕರಿಗೆ ನೀಡಿ ಮುಂದಿಗೂ ತಮ್ಮ ಅಗತ್ಯಗಳಿಗೆ ಸ್ಪಂದಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಾಯಿಬಾಬಾ ಪೂಜಾ ಸಮಿತಿಯ ಕಾರ್ಯಕಾರೀ ಸಮಿತಿಯ ಸದಸ್ಯರಾದ ಸತೀಶ್ ಭಂಡಾರಿ, ಪ್ರದೀಪ್ ಸುವರ್ಣ ಹಾಗೂ ಪಾರಿತೋಷ್ ರೈ, ರಾಧಿಕಾ ಶೇಣವ, ಯಶೋಧಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.





