ಘಾಟ್ ಕೋಪರ್ ಪಶ್ಚಿಮ ಅಸಲ್ಪ , ಶ್ರೀ ಕ್ಷೇತ್ರ ಗೀತಾಂಬಿಕಾ ದೇವಸ್ಥಾನದಲ್ಲಿ ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಆಷಾಢ ಮಾಸ ಶುಕ್ಲ ಪಕ್ಷದ ಶುಭ ದಿನವಾದ 2026ರ ಜುಲೈ 29ರಂದು (ಬುಧವಾರ) ಗುರು ಪೂರ್ಣಿಮಾ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ನೆರವೇರಲಿದೆ. ಶ್ರೀ ದೇವಿ ದರ್ಶನದ ಆಶಯದಂತೆ ಶ್ರೀ ನಿತ್ಯಾನಂದ ಗುರುಗಳ ವಿಗ್ರಹದ ಎತ್ತರವನ್ನು ಹೆಚ್ಚಿಸಲು ನಿರ್ಮಿಸಲಾಗಿರುವ ನೂತನ ಅಮೃತಶಿಲೆಯ (Marble) ಪೀಠದ ಉದ್ಘಾಟನೆಯು ಈ ಪವಿತ್ರ ದಿನದಂದು ಜರುಗಲಿದ್ದು, ಇದರೊಂದಿಗೆ ಕಲಶ ಪೂಜೆ, ರಂಗಪೂಜೆ ಹಾಗೂ ಅನ್ನದಾನ ಕಾರ್ಯಕ್ರಮಗಳು ನಡೆಯಲಿವೆ.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ನಿತ್ಯಾನಂದ ಗುರುಗಳ ನೂತನ ಅಮೃತಶಿಲೆಯ ಪೀಠ ಹಾಗೂ ಅನ್ನದಾನ ಸೇವೆಯನ್ನು ಶ್ರೀ ಸತೀಶ್ ಕುಶಲ ಶೆಟ್ಟಿ ಮತ್ತು ಶ್ರೀಮತಿ ಶೋಭಾ ಕುಶಲ ಶೆಟ್ಟಿ ದಂಪತಿಗಳು ನೆರವೇರಿಸಿಕೊಡಲಿದ್ದಾರೆ. ಹಾಗೆಯೇ ಶ್ರೀ ಗುರುಗಳ ಮಂಟಪ ಸೇವೆಯನ್ನು ಶ್ರೀಮತಿ ಜಲಜಾ ಆರ್. ಪೂಜಾರಿ ವಹಿಸಿಕೊಂಡಿದ್ದಾರೆ. ಸೇವಾದಾರರ ಕೊಡುಗೆಯಾಗಿ ಶ್ರೀ ಸತೀಶ್ ಕುಶಲ ಶೆಟ್ಟಿ ಅವರಿಂದ 5 ಅಟ್ಟಿಗೆ ಮಲ್ಲಿಗೆ ಸೇವೆ ಮತ್ತು ಸಂಪೂರ್ಣ ಹೂವಿನ ಅಲಂಕಾರ ಸೇವೆ, ಶ್ರೀಮತಿ ಸುಶೀಲಾ ವಾಸು ಪೂಜಾರಿ ಅವರಿಂದ ಸಂಪೂರ್ಣ ಹಣ್ಣಿನ ಸೇವೆ ಹಾಗೂ ಶ್ರೀ ಡಿ. ಎಂ. ಕೋಟ್ಯಾನ್ ಅವರಿಂದ ಪಾದುಕಾ ಸೇವೆ ಸಮರ್ಪಣೆಯಾಗಲಿದೆ. ಇದರ ಹೊರತಾಗಿ ಹೂವು, ಹಣ್ಣು, ಪ್ರಸಾದ ಹಾಗೂ ರಂಗಪೂಜೆಯ ಇತರ ವೆಚ್ಚಗಳನ್ನು ಭಕ್ತಾದಿಗಳು ಹಂಚಿಕೊಳ್ಳಲು ಆಡಳಿತ ಮಂಡಳಿ ವಿನಂತಿಸಿದೆ.
ಕಾರ್ಯಕ್ರಮದ ವೇಳಾಪಟ್ಟಿ:
ಬೆಳಿಗ್ಗೆ 10:00 ಗಂಟೆಗೆ ನವಕಲಶ ಅಭಿಷೇಕದೊಂದಿಗೆ ಪೂಜಾ ವಿಧಿವಿಧಾನಗಳು ಆರಂಭವಾಗಲಿದ್ದು, ಸಾಯಂಕಾಲ 6:00 ಗಂಟೆಗೆ ಭಜನೆ ನಡೆಯಲಿದೆ. ತದನಂತರ ರಂಗಪೂಜೆ, ಗುರುಪೂಜೆ, ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ಜರುಗಲಿದೆ. ಈ ಪವಿತ್ರ ಹಾಗೂ ಮಂಗಳಕರ ಸಮಾರಂಭದಲ್ಲಿ ಸರ್ವ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ನಿತ್ಯಾನಂದ ಗುರುಗಳ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕಾಗಿ ಕೋರಲಾಗಿದೆ.





