September 14, 2026
Mumbai News Kannada
ಮುಂಬಯಿ

ತುಳು ಸಂಘ ಬೋರಿವಲಿಯ ವಾರ್ಷಿಕ ಮಹಾಸಭೆ :ಹರೀಶ್ ಮೈಂದನ್ ಸಾರಥ್ಯದಲ್ಲಿ ಸಂಘದಲ್ಲಿ ಹೆಚ್ಚು ಕಾರ್ಯಕ್ರಮಗಳು ನಡೆಯುತ್ತಿದೆ – ವಿರಾರ್ ಶಂಕರ ಶೆಟ್ಟಿ





ಮುಂಬಯಿ : ಸಂಘ ಸಂಸ್ಥೆಗಳನ್ನು ನಡೆಸುವುದು ಸುಲಭ ಸಾಧ್ಯವಲ್ಲದಿದ್ದರೂ, ಸಂಘಕ್ಕೆ ಹೆಚ್ಚಿನ ಸಮಯವನ್ನು ನೀಡಿ ಸಂಘದಲ್ಲಿ ಹೆಚ್ಚಿನ ಸಮಾಜಪರ ಚಟುವಟಿಕೆಗಳನ್ನು ನಡೆಸುವಲ್ಲಿ ಈಗಿನ ಅಧ್ಯಕ್ಷರಾದ ಹರೀಶ್ ಮೈಂದನ್ ಮತ್ತವರ ತಂಡ ಸಾಕಷ್ಟು ಕ್ರೀಯಾಶೀಲವಾಗಿದೆ ಎಂದು ತುಳು ಸಂಘ ಬೋರಿವಲಿಯ ಗೌರವ ಅಧ್ಯಕ್ಷ ವಿರಾರ್ ಶಂಕರ ಶೆಟ್ಟಿಯವರು ನುಡಿದರು.

ಸೆ. 12ರಂದು ಬೊರಿವಲಿ ಪಶ್ಚಿಮ ಯೋಗಿನಗರ ಹೌಸಿಂಗ್ ಸೊಸೈಟಿ ಹಾಲ್, ಇಲ್ಲಿ ನಡೆದ ಸಂಘದ ಸರ್ವ ಸದಸ್ಯರ 16ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದ ಅವರು ಸಂಘದಲ್ಲಿ ಮಹಿಳೆಯರು ಹೆಚ್ಚಿನ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಎಲ್ಲರೂ ಸೇರಿದಲ್ಲಿ ಸಂಘದ ಚಟುವಟಿಕೆಗಳನ್ನು ಸುಲಭವಾಗಿ ಮಾಡಬಹುದು. ಇದೇ ರೀತಿ ಸಂಘದ ಚಟುವಟಿಕೆಗಳು ಮುಂದುವರಿಯಲಿ ಹಾಗೂ ಎಲೆಮರೆಯಲ್ಲಿದ್ದು ಸಂಘಕ್ಕೆ ಸಹಕರಿಸುವವರನ್ನು ಗುರುತಿಸುವಂತಾಗಲಿ ಎಂದರು.

ಪ್ರಧಾನ ಕಾರ್ಯದರ್ಶಿ ಕೃಷ್ಣರಾಜ್ ಸುವರ್ಣ ಸ್ವಾಗತಿಸಿ ಗತ ಸಭೆಯ ವರದಿಯನ್ನು ಮಂಡಿಸಿದರು. ಸಂಘದ ವಾರ್ಷಿಕ ಲೆಕ್ಕಪತ್ರವನ್ನು ಗೌರವ ಕೋಶಾಧಿಕಾರಿ ದಿವಾಕರ ಕರ್ಕೇರ ಮಂಡಿಸಿದರು.

ಸಂಘದ ಉಪಾಧ್ಯಕ್ಷ ರಜಿತ್ ಸುವರ್ಣ, ಜೊತೆ ಕಾರ್ಯದರ್ಶಿ ತಿಲೋತ್ತಮ ವೈದ್ಯ, ಜೊತೆ ಕೋಶಾಧಿಕಾರಿ ಟಿ. ವಿ. ಪೂಜಾರಿ, ಸಂಘದ ಯುವ ವಿಭಾಗದ ಕಾರ್ಯಾಧ್ಯಕ್ಷ ನ್ಯಾ. ರಾಘವ ಎಂ. ಮಹಿಳಾ ವಿಭಾಗದ ಕಾರ್ಯದರ್ಶಿ ವಿಜಯಲಕ್ಷ್ಮೀ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಶ್ರೀ ಕೃಷ್ಣರಾಜ್ ಸುವರ್ಣ ಧನ್ಯವಾದ ಸಲ್ಲಿಸಿದರು.

===

ಸಂಘದ ವತಿಯಿಂದ “ತುಳು ಶ್ರೀ 2027” ಪ್ರಶಸ್ತಿ ಪ್ರದಾನ – ಹರೀಶ್ ಮೈಂದನ್ ಘೋಷಣೆ
ಅಧ್ಯಕ್ಷರಾದ ಹರೀಶ್ ಮೈಂದನ್ ಮಾತನಾಡುತ್ತಾ ನಮ್ಮ ತುಳು ಸಂಘ ಕಳೆದ ಹದಿನಾರು–ಹದಿನೇಳು ವರ್ಷಗಳಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿಕೊಂಡು, ತುಳು ಭಾಷೆ, ಸಂಸ್ಕೃತಿ ಮತ್ತು ನಮ್ಮ ಸಮಾಜದ ಸೇವೆಯಲ್ಲಿ ತನ್ನದೇ ಆದ ರೀತಿಯಲ್ಲಿ ಮುಂದುವರಿದುಕೊಂಡು ಬರುತ್ತಿದೆ. ಈ ವರ್ಷದಿಂದ ಸಂಘದ ವತಿಯಿಂದ ಸೂಕ್ತ ವ್ಯಕ್ತಿಗೆ “ತುಳು ಶ್ರೀ 2027” ಪ್ರಶಸ್ತಿ ಪ್ರದಾನಿಸಲಿದ್ದೇವೆ. ತುಳು ಭಾಷೆ, ತುಳು ಸಂಸ್ಕೃತಿ, ಕಲೆ, ಸಾಹಿತ್ಯ ಅಥವಾ ಸಮಾಜ ಸೇವೆ—ಯಾವುದೇ ಕ್ಷೇತ್ರದಲ್ಲಾಗಲಿ, ಗಮನಾರ್ಹವಾದ ಕೆಲಸವನ್ನು ಮಾಡಿ, ತುಳು ಮಾತೆಯ ಸೇವೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಿರುವ ಒಬ್ಬ ಅರ್ಹ ವ್ಯಕ್ತಿಯನ್ನು ಗುರುತಿಸಿ ಗೌರವಿಸುವುದು ಈ ಪ್ರಶಸ್ತಿಯ ಉದ್ದೇಶ. ಅದಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿ, ಬಂದ ಅರ್ಜಿಗಳನ್ನು ಆಯ್ಕೆ ಸಮಿತಿಯ ಮುಂದೆ ಇಡುತ್ತೇವೆ. ಆ ಸಮಿತಿ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುತ್ತದೆ. ಆ ವ್ಯಕ್ತಿಗೆ ನಮ್ಮ 2027ರ ವಾರ್ಷಿಕ ಸಮಾರಂಭದಲ್ಲಿ “ತುಳು ಶ್ರೀ 2027” ಪ್ರಶಸ್ತಿಯನ್ನು ನೀಡಿ ಗೌರವಿಸುತ್ತೇವೆ.
ಇದು ನಿಜವಾಗಿಯೂ ಅರ್ಹತೆ ಇರುವ, ತುಳು ಭಾಷೆ ಮತ್ತು ಸಂಸ್ಕೃತಿಗಾಗಿ ತಮ್ಮ ಬದುಕಿನಲ್ಲಿ ಏನಾದರೂ ಅರ್ಥಪೂರ್ಣವಾದ ಕೆಲಸ ಮಾಡಿರುವ ವ್ಯಕ್ತಿಯನ್ನು ಗುರುತಿಸಿ, ಅವರ ಸೇವೆಯನ್ನು ನಮ್ಮೆಲ್ಲರ ಪರವಾಗಿ ಗೌರವಿಸುವ ಒಂದು ಸಣ್ಣ ಪ್ರಯತ್ನ. ಪ್ರಶಸ್ತಿ ಜೊತೆಗೆ ನಗದು ಬಹುಮಾನವನ್ನೂ ನೀಡುವ ಉದ್ದೇಶ ನಮ್ಮದು. ಒಟ್ಟಿನಲ್ಲಿ, ತುಳು ಮಾತೆಯ ಸೇವೆಯಲ್ಲಿ ನಿಸ್ವಾರ್ಥವಾಗಿ ದುಡಿದಿರುವ ಒಬ್ಬ ಅರ್ಹ ವ್ಯಕ್ತಿಯನ್ನು ನಮ್ಮೆಲ್ಲರ ಪರವಾಗಿ ಗುರುತಿಸಿ ಗೌರವಿಸಬೇಕು—ಇದೇ “ತುಳು ಶ್ರೀ 2027” ಪ್ರಶಸ್ತಿಯ ಹಿಂದಿರುವ ನಮ್ಮ ಮುಖ್ಯ ಉದ್ದೇಶ.



Related posts

ಏ.23 – 25: ಉಳೆಪಾಡಿ ಶ್ರೀ ಉಮಾಮಹೇಶ್ವರ ಮಹಾ ಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ

Mumbai News Desk

ಕಲ್ವಾದಲ್ಲಿ ವಿಜೃಂಭಣೆಯಿಂದ ಜರುಗಿದ ‘ಆಟಿಡೊಂಜಿ ದಿನ’ ಸಂಭ್ರಮ

Mumbai News Desk

ಕಲಾತಂತ್ರ ಪ್ರೊಡಕ್ಷನ್ ಲೋಕಾರ್ಪಣೆ : ಜು. 28ರಂದು ‘ತುಡರ್’ ತುಳು ಚಿತ್ರ ಬಿಡುಗಡೆ.

Mumbai News Desk

ದುರ್ಗಾಪ್ರಸಾದ್ ಸಿ. ಸಾಲ್ಯಾನ್, ಪ್ರತಾಪ್ ಎನ್. ಕೋಟ್ಯಾನ್‌ರಿಗೆ ನುಡಿ ನಮನ

Mumbai News Desk

ಶ್ರೀ ಉಮಾ ಮಹೇಶ್ವರಿ ದೇವಸ್ಥಾನ ಜರಿಮರಿಯಲ್ಲಿ ರಾಮ ನಾಮ ಜಪ ಯಜ್ಞ ಸಂಪನ್ನ.

Mumbai News Desk

ಕಾಪು ಮೊಗವೀರ ಮಹಿಳಾ ಮಂಡಳಿ, ಮುಂಬಾಯಿ ಇವರ ವತಿಯಿಂದ “ಆಟಿದ ಒಂಜಿ ಕೂಟ” ಹಾಗೂ “ಅಭಿನಂದನಾ ಕಾರ್ಯಕ್ರಮ”

Mumbai News Desk