
ಹಳೆ ವಿದ್ಯಾರ್ಥಿಗಳು ಕಾಲೇಜಿನ ಅಭಿವೃದ್ಧಿಗೆ ಸಹಕರಿಸಬೇಕು –ಪ್ರೊ . ವೆಂಕಟೇಶ್ ಭಟ್
ಹಳೆ ವಿದ್ಯಾರ್ಥಿಗಳು ಕಾಲೇಜಿನ ಎಲ್ಲಾ ಚಟುವಟಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಾಲೇಜಿನ ಅಭಿವೃದ್ಧಿಗೆ ಸಹಕರಿಸಬೇಕಾಗಿ ವಿಜಯಾ ಕಾಲೇಜು ಮೂಲ್ಕಿ ಯ ಪ್ರಾಂಶುಪಾಲ ಪ್ರೊ. ವೆಂಕಟೇಶ್ ಭಟ್ ಕರೆಯಿತ್ತರು.
ಅವರು ದಿನಾಂಕ 17.05.2026 ರಂದು ವಿಜಯಾ ಕಾಲೇನಲ್ಲಿ ನಡೆದ ವಿಜಯ ಕಾಲೇಜ್ ಮೂಲ್ಕಿ
ಬಿಕಾಂ ಬ್ಯಾಚ್ 1994-97 ಇವರು ಆಯೋಜಿಸಿದ್ದ SSLC ಮತ್ತು PUC ಯಲ್ಲಿ ಉನ್ನತ ಸಾಧನೆಗೈದ ವಿದ್ಯಾರ್ಥಿಗಳಿಗೆ ನಡೆದ ಸಮ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಿಜಯ ಕಾಲೇಜ್ ಮೂಲ್ಕಿ ಬಿಕಾಂ ಬ್ಯಾಚ್ 1994-97 ನ ಅಧ್ಯಕ್ಷ ಅನಿಲ್ ಶೆಟ್ಟಿಯವರು ವಹಿಸಿದ್ದರು
ಮುಖ್ಯ ಅತಿಥಿಗಳಾಗಿ ವಿಜಯಾ ಪಿ ಯು ಕಾಲೇಜಿನ ಪ್ರಾಂಶುಪಾಲ ಅರುಣ್ ಕುಮಾರ್, ಮೂಡಬಿದ್ರೆ ಮಹಾವೀರ ಕಾಲೇಜಿನ ಕಾಮರ್ಸ್ ವಿಭಾಗದ ಮುಖ್ಯಸ್ಥ ಪ್ರೊ. ಹರೀಶ್,, ವಿಜಯ ಕಾಲೇಜ್ ಮೂಲ್ಕಿಬಿಕಾಂ ಬ್ಯಾಚ್ 1994-97 ನ ಪ್ರಧಾನ ಕಾರ್ಯದರ್ಶಿ C. A ರೋಹಿತಾಕ್ಷ ದೇವಾಡಿಗ ಮುಂಬಯಿ ಇವರುಗಳು ಭಾಗವಹಿಸಿದ್ದರು.
ವಿಜಯ ಕಾಲೇಜ್ ಮೂಲ್ಕಿ ಬಿಕಾಂ ಬ್ಯಾಚ್ 1994-97 ನ ಉಪಾಧ್ಯಕ್ಷ ವಿಶ್ವಜಿತ್ ಕೋಟ್ಯಾನ್ ಸ್ವಾಗತಿಸಿದರು, ಸುಮಂಗಲ ಶೆಟ್ಟಿ ಪ್ರಾರ್ಥನೆ ಗೈದರು, ಉಪಾಧ್ಯಕ್ಷ ಮನೋಹರ್ ಹೆಜಮಾಡಿ ಕಾರ್ಯಕ್ರಮ ನಿರೂಪಿಸಿದರು.




